ಮುಂಬಯಿ: ಅಕ್ರಮ ನಡೆದಿದೆ ಎಂಬ ಕಾರಣದಡಿ ಭ್ರಷ್ಟಾಚಾರ ವಿರೋಧಿ ಬ್ಯೂರೋ ಕಣ್ಗಾವಲಿನಡಿಯಲ್ಲಿರುವ ಸುಮಾರು 6000 ಕೋಟಿ ರೂ. ಮೌಲ್ಯದ 300 ನೀರಾವರಿ ಯೋಜನೆ ಟೆಂಡರ್ಗಳನ್ನು ಮಹಾರಾಷ್ಟ್ರ ಸರ್ಕಾರ ಮಂಗಳವಾರ ಕೈಬಿಟ್ಟಿರುವುದಾಗಿ ವರದಿಗಳು ತಿಳಿಸಿವೆ.
ಬಿಜೆಪಿ ಸರ್ಕಾರ ನೀರಾವರಿ ಯೋಜನೆಯನ್ನು ಕೈಬಿಟ್ಟಿರುವುದು ಇದೇ ಮೊದಲಲ್ಲ. ಈ ಹಿಂದಿನ ಕಾಂಗ್ರೆಸ್-ಎನ್ಸಿಪಿ ಸರ್ಕಾರ ಮಂಜೂರು ಮಾಡಿದ್ದ 624.28 ಕೋಟಿ ರೂ. ಮೌಲ್ಯದ ನೀರಾವರಿಯ 128 ಯೋಜನೆಗಳನ್ನು ಕಳೆದ ನಾಲ್ಕು ತಿಂಗಳ ಹಿಂದೆ ಕೈಬಿಟ್ಟಿತ್ತು.
ಫಡ್ನವಿಸ್ ಸರ್ಕಾರ ಕೊಂಕಣ್ ಪ್ರದೇಶದ 12 ಯೋಜನೆಗಳು ಸೇರಿದಂತೆ ಇತರ 14 ಯೋಜನೆಗಳ ತನಿಖೆ ನಡೆಸುವಂತೆ ಭ್ರಷ್ಟಾಚಾರ ವಿರೋಧಿ ಬ್ಯೂರೋಗೆ ನಿರ್ದೇಶಿಸಿದೆ.
ಜಲ ಸಂಪನ್ಮೂಲ ಸಚಿವ ಗಿರೀಶ್ ಮಹಾಜನ್, ಅಧಿಕಾರಿಗಳು ನೀರಾವರಿ ಯೋಜನೆಗೆ ಹಸಿರು ನಿಶಾನೆ ನೀಡಲು ಎನ್ಸಿಪಿ ಸರ್ಕಾರ ಒತ್ತಡ ಹೇರಿತ್ತು ಎಂದು ಈ ಹಿಂದೆ ಆರೋಪಿಸಿದ್ದರು.
ಡಿಸೆಂಬರ್ 2012ರಲ್ಲಿ ಕಾಂಗ್ರೆಸ್-ಎನ್ಸಿಪಿ ಆಡಳಿತದ ಸಂದರ್ಭ ಬಿಜೆಪಿ ಮತ್ತು ಶಿವಸೇನೆ 70,000 ಕೋಟಿ ರೂ. ಹಗರಣದ ಬಗ್ಗೆ ಆರೋಪಿಸಿದ ನಂತರ ಎನ್ಸಿಪಿ ಸರ್ಕಾರ ನೀರಾವರಿ ಯೋಜನೆಯಲ್ಲಿ ವೆಚ್ಚ ಏರಿಕೆ ಪರಿಶೀಲಿಸಲು ಮಾಧವ್ ಚಿತಾಲೆ ಕಮಿಟಿ ನೇಮಿಸಿತ್ತು.
ಮಾರ್ಚ್ 2015ರಲ್ಲಿ ಕಮಿಟಿ ಇದರ ವರದಿಯನ್ನು ಸಲ್ಲಿಸಿತ್ತು.
ಅಂದಿನ ಜಲ ಸಂಪನ್ಮೂಲ ಸಚಿವ ಸುನಿಲ್ ತಟ್ಕರೆ (ಎನ್ಸಿಪಿ), ವಿಧಾನಸಭೆಯಲ್ಲಿ ವರದಿ ಮಂಡಿಸುವ ಸಂದರ್ಭ ವೆಚ್ಚ ಏರಿಕೆ ಕುರಿತು ಮುಖ್ಯ ಹಣಕಾಸು ಅಧಿಕಾರಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರು ನೀರಾವರಿ ಅಭಿವೃದ್ಧಿ ನಿಒಗಮಗಳ ಆಡಳಿತ ಮಂಡಳಿ ಗಮನಕ್ಕೆ ತಂದ ನಂತರವೂ ಇದಕ್ಕೆ ಅನುಮೋದನೆ ನೀಡಲಾಗಿತ್ತು ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.