ನವದೆಹಲಿ : ತನ್ನ ಅದ್ಭುತ ನೃತ್ಯಪ್ರತಿಭೆಯಿಂದ ಭಾರತ ಹೆಮ್ಮೆ ಪಡುವಂತೆ ಮಾಡಿದ್ದ ನೃತ್ಯಗಾರ್ತಿ ತಾರಾ ಬಾಲ್ಗೋಪಾಲ್ ಅತಿ ಕಡುಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಭಾರತದ ನೃತ್ಯ ಸಂಸ್ಕೃತಿಯನ್ನು ಜಗತ್ತಿಗೆ ಪಸರಿಸಿ, ಪೋಸ್ಟಲ್ ಸ್ಟ್ಯಾಂಪ್ನಿಂದಲೂ ಪುರಸ್ಕೃತರಾದ ತಮಿಳುನಾಡಿನ 80 ವರ್ಷದ ನೃತ್ಯಗಾರ್ತಿ ಈಗ ದೆಹಲಿಯ ರಜೋರಿ ಗಾರ್ಡನ್ನ ಚಾರಿಟಿಯೊಂದರಲ್ಲಿ ಮದ್ರಾಸಿ ಮಹಿಳೆ ಎಂದು ಕರೆಸಿಕೊಳ್ಳುತ್ತಾ ಜೀವನ ದೂಡುತ್ತಿದ್ದಾರೆ.
ಕಥಕ್, ಕಥಕ್ಕಳಿ, ಭರತನಾಟ್ಯ ನೃತ್ಯ ವಿಭಾಗದಲ್ಲಿ ಅಪಾರ ಸಾಧನೆ ಮಾಡಿದ ಅವರು ದಿನಗಳುರುಳಿದಂತೆ ಸರ್ಕಾರ, ಜನರ ನಿರ್ಲಕ್ಷಕ್ಕೆ ಒಳಗಾಗಿ ಮೂಲೆಗುಂಪಾಗಿದ್ದಾರೆ.
ಇತ್ತೀಚೆಗೆ ಅವರ ಬಗ್ಗೆ ಮಾಧ್ಯಮಗಳು ವರದಿ ಪ್ರಸಾರ ಮಾಡಿರುವ ಹಿನ್ನಲೆಯಲ್ಲಿ ಅವರ ನೆರವಿಗೆ ಕೇಂದ್ರ ಧಾವಿಸಿದೆ.
ತಾರಾ ಅವರಿಗೆ ಬೇಕಾದ ಎಲ್ಲಾ ಅಗತ್ಯ ನೆರವನ್ನು ನೀಡುವುದಾಗಿ ಸಚಿವೆ ಸುಷ್ಮಾ ಸ್ವರಾಜ್ ಭರವಸೆ ನೀಡಿದ್ದಾರೆ.
ಈ ಬಗ್ಗೆ ಚರ್ಚಿಸಲು ದೆಹಲಿ ಬಿಜೆಪಿ ಶಾಸಕ ಸುಭಾಷ್ ಆರ್ಯ ಅವರನ್ನು ತಮ್ಮ ಬಳಿ ಕರೆಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.