ಪಂಪಾ : ಕೇರಳದಲ್ಲಿರುವ ಪ್ರಸಿದ್ಧ ಶಬರಿಮಲೈ ದೇಗುಲದಲ್ಲಿ ವಿಐಪಿಗಳಿಗಿರುವ ವಿಶೇಷ ದರ್ಶನದ ವ್ಯವಸ್ಥೆಯನ್ನು ನಿಷೇಧಿಸಬೇಕು ಮತ್ತು ಅಲ್ಲಿ ತಿರುಪತಿ ತಿರುಮಲ ಮಾದರಿಯ ಯಾತ್ರಿಕರ ಕ್ಯೂ ವ್ಯವಸ್ಥೆಯನ್ನು ಅಳವಡಿಸಬೇಕು ಎಂದು ಕೇರಳ ಸಿಎಂ ಪಿನರಾಯಿ ವಿಜಯನ್ ಹೇಳಿದ್ದಾರೆ.
ಶಬರಿಮಲೈಗೆ ಯಾತ್ರೆ ಇನ್ನೇನು ಆರಂಭವಾಗಲಿರುವ ಹಿನ್ನಲೆಯಲ್ಲಿ ದೇಗುಲದಲ್ಲಿನ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುವ ಸಲುವಾಗಿ ಪರಿಶೀಲನಾ ಸಭೆಯನ್ನು ನಡೆಸಿದ್ದಾರೆ.
ಈ ವೇಳೆ ಜನಜಂಗುಳಿಯನ್ನು ತಡೆಯಲು ನಿತ್ಯವೂ ದೇಗುಲವನ್ನು ತೆರೆದಿಡಬೇಕು, ತಿರುಪತಿ ಮಾದರಿಯ 1,000 ರೂ. ಮತ್ತು 250 ರೂ. ದರ್ಶನ ಟಿಕೆಟ್ಗಳನ್ನು ಪರಿಚಯಿಸಬೇಕು ಎಂಬ ಅಭಿಪ್ರಾಯವನ್ನು ಮಂಡಿಸಿದ್ದಾರೆ.
ಆದರೆ ಶಬರಿಮಲೈ ಉಸ್ತುವಾರಿ ವಹಿಸಿರುವ ತಿರುವಾಂಕೂರ್ ದೇವಸ್ವಂ ಬೋರ್ಡ್ ಸಿಎಂ ಅವರ ಈ ಅಭಿಪ್ರಾಯವನ್ನು ತಳ್ಳಿ ಹಾಕಿದೆ.
ದೇಗುಲದಲ್ಲಿನ ಕೆಲವೊಂದು ರೀತಿ ರಿವಾಜು ಸಂಪ್ರದಾಯಗಳನ್ನು ಪಾಲಿಸುವುದು ಅತ್ಯಗತ್ಯ. ದೇಗುಲವನ್ನು ನಿತ್ಯವೂ ತೆರೆದಿಡುವುದು ಸಾಧ್ಯವಿಲ್ಲದ್ದು ಎಂದಿದೆ.
ಅಲ್ಲದೆ ಸಭೆಯಲ್ಲಿ ದೇಗುಲದ ಪಾರ್ಕಿಂಗ್ ಸೌಲಭ್ಯ ಅಭಿವೃದ್ಧಿ, ಏರ್ಪೋರ್ಟ್ ವ್ಯವಸ್ಥೆ ಕಲ್ಪಿಸುವ ಅಗತ್ಯಗಳ ಬಗ್ಗೆ ಚರ್ಚೆ ನಡೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.