ವಿಜಯವಾಡ: 12 ವರ್ಷಗಳಿಗೊಮ್ಮೆ ನಡೆಯುವ ಕೃಷ್ಣ ಪುಷ್ಕರಲು (ಪುಷ್ಕರಂ) ಉತ್ಸವ ಆಂಧ್ರಪ್ರದೇಶದ ವಿಜಯವಾಡದಲ್ಲಿ ಶುಕ್ರವಾರ ಆರಂಭಗೊಳ್ಳಲಿದೆ. 12 ದಿನಗಳ ಕಾಲ ನಡೆಯುವ ಈ ಉತ್ಸವಕ್ಕೆ ಸುಮಾರು 3.5 ಕೋಟಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ.
ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಉತ್ಸವಕ್ಕೆ ಚಾಲನೆ ನೀಡಲಿದ್ದು, ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ವಿಜಯವಾಡದ ದುರ್ಗಾ ಘಾಟ್, ಕರ್ನೂಲ್, ಗುಂಟೂರ್ಗಳಲ್ಲಿ ಜಿಲ್ಲೆಗಳಲ್ಲಿ ಭಕ್ತರು ಕೃಷ್ಣಾ ನದಿಯಲ್ಲಿ ತೀರ್ಥಸ್ನಾನ ಮಾಡಲಿದ್ದಾರೆ. ಇದಕ್ಕಾಗಿ ಸುಮಾರು 170 ತೀರ್ಥಸ್ನಾನ ಘಾಟ್ಗಳನ್ನು ನಿರ್ಮಿಸಲಾಗಿದೆ.
ಗೋದಾವರಿ ಮತ್ತು ಕೃಷ್ಣಾ ನದಿಗಳ ಸಂಗಮವಾದ ಇಬ್ರಾಹಿಂಪಟ್ನಂನಲ್ಲಿ ಪ್ರತಿ ದಿನ ‘ಹರತಿ’ ಕಾರ್ಯಕ್ರಮ ನಡೆಯಲಿದೆ. ವಿವಿಧ ಕಲಾವಿದರನ್ನೊಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಆಂಧ್ರ ಸರ್ಕಾರ krishnapushkaram.Ap.Gov.In ವೆಬ್ಸೈಟ್ ಬಿಡುಗಡೆ ಮಾಡಿದ್ದು, ವೆಬ್ಸೈಟ್ನಲ್ಲಿ ಕಾರ್ಯಕ್ರಮದ ಎಲ್ಲ ಮಾಹಿತಿಗಳು ಲಭ್ಯವಿರಲಿದೆ. ಜನರಿಗೆ ಘಾಟ್ ಹಾಗೂ ಬಸ್ ಸೇವೆಗಳ ಮಾಹಿತಿ ಹೊಂದಿರುವ ಜಿಪಿಎಸ್ ಮೊಬೈಲ್ ಅಪ್ಲಿಕೇಷನ್ನ್ನು ಕೂಡ ಬಿಡುಗಡೆ ಮಾಡಲಾಗಿದೆ.
ಗುರು ಗ್ರಹವು ಕನ್ಯಾ ರಾಶಿಗೆ ಪ್ರವೇಶಿಸುವ ಸಂದರ್ಭ ಕೃಷ್ಣಾ ನದಿಗೆ ಗಂಗೆ ಪಾವಿತ್ರ್ಯ ಬರುತ್ತದೆ ಎಂದು ನಂಬಲಾಗಿದೆ. ಪಥ ಬದಲಾಗುವ ದಿನದಂದು ಉತ್ಸವ ಆರಂಭವಾಗುತ್ತಿದ್ದು, ಭಕ್ತರು ಕೃಷ್ಣಾ ನದಿಯಲ್ಲಿ ತೀರ್ಥಸ್ನಾನ ಮಾಡುತ್ತಾರೆ. ರಾಜ್ಯದ ಕೂಡಲಸಂಗಮ, ಕೋಲಾರದಲ್ಲೂ ಪುಷ್ಕರೋತ್ಸವ ಆಚರಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.