ನವದೆಹಲಿ : ಮಾಧ್ಯಮಗಳು ಮತ್ತು ಟೀಕಾಕಾರರು ಆರ್ಎಸ್ಎಸ್ ವಿರುದ್ಧ ನಿರಂತರವಾಗಿ ಕುರುಡು ಟೀಕೆಗಳನ್ನು ಮಾಡುವುದನ್ನು ನಿಲ್ಲಿಸಬೇಕು ಎಂದು ಬಿಬಿಸಿ ಸ್ಟಾಲ್ವರ್ಟ್ ಮಾರ್ಕ್ ಟುಲ್ಲಿ ಹೇಳಿದ್ದಾರೆ.
ರಾಜೀವ್ ಕುಮಾರ್ ಅವರು ಬರೆದ ‘ಮೋದಿ ಅಂಡ್ ಹಿಸ್ ಚಾಲೆಂಜಸ್’ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ಈ ಪುಸ್ತಕದಲ್ಲಿನ ದೃಷ್ಟಿಕೋನವನ್ನು ಸ್ವಾಗತಿಸಿದರು. ಅಲ್ಲದೆ ಮೋದಿಯವರ ಕಾರ್ಯಗಳನ್ನು ಕೊಂಡಾಡಿದರು.
ಆರ್ಎಸ್ಎಸ್ನ್ನು ಟೀಕಿಸುವ ಬದಲು ಅದರೊಂದಿಗೆ ಸೇರಿ ಉತ್ತಮ ಕಾರ್ಯಗಳನ್ನು ಮಾಡಬೇಕು ಎಂದು ಅವರು ಹೇಳಿದರು.
ಮಾರ್ಕ್ ಟುಲ್ಲಿ ಅವರು ಹಲವಾರು ವರ್ಷಗಳಿಂದ ಭಾರತದಲ್ಲಿ ವಿದೇಶಿ ಮಾಧ್ಯಮಗಳ ಧ್ವನಿ ಮತ್ತು ಮುಖವಾಗಿದ್ದವರು.
ಸಮಾರಂಭದಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಭಾಗವಹಿಸಿ, ಆರ್ಎಸ್ಎಸ್ ವಿವಿಧ ವಲಯಗಳನ್ನು ತಲುಪಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿದೆ. ಅದು ಒಂದು ಸಮುದಾಯವನ್ನು ಪ್ರೀತಿಸಿ ಅಥವಾ ದ್ವೇಷಿಸಿ ಎಂದು ಯಾವತ್ತೂ ಹೇಳಿಕೊಟ್ಟಿಲ್ಲ ಎಂದಿದ್ದಾರೆ.
ರಾಜೀವ್ ಕುಮಾರ್ ಅವರ ಪುಸ್ತಕ ಕಳೆದ ಎರಡು ವರ್ಷಗಳ ಮೋದಿ ಸರ್ಕಾರದ ಪ್ರಾಮಾಣಿಕ ದಾಖಲೆಗಳನ್ನು ಒದಗಿಸಿದೆ. ಮೋದಿ ಮುಂದಿರುವ ಸವಾಲುಗಳನ್ನಷ್ಟೇ ಗುರುತಿಸದೆ, ಬದಲಾಗಿ ಅವರ ದೃಷ್ಟಿಕೋನವನ್ನು ವಿಶ್ಲೇಷಿಸಿ ಕೆಲವೊಂದು ಸಲಹೆಗಳನ್ನೂ ನೀಡಿದೆ.
ರಾಜೀವ್ ಕುಮಾರ್ ಅವರು ಸಿಪಿಆರ್ನ ಹಿರಿಯ ಮುಖಂಡರಾಗಿದ್ದು, ಆರ್ಥಿಕ ತಜ್ಞ ಮತ್ತು ಹಲವಾರು ಪುಸ್ತಕಗಳ ಲೇಖಕರೂ ಆಗಿದ್ದಾರೆ.
ತಮ್ಮ ಪುಸ್ತಕ ಮೋದಿ ಬಗೆಗಿನ ಸುಳ್ಳುಗಳನ್ನು ಬಯಲು ಮಾಡುವ ಪ್ರಯತ್ನ ಮಾಡಿದೆ. ಮತ್ತು ಅವರ ಜೀವನ, ರಾಜಕೀಯ ಬೆಳವಣಿಗೆ, ಅವರು ಮಾಡಿದ ಕಾರ್ಯಗಳ ಬಗ್ಗೆ ವಿಶ್ಲೇಷಣೆ ನಡೆಸಿದೆ ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.