ಚೆನ್ನೈ: ರೈಲು ಬೋಗಿಯ ಛಾವಣಿಗೆ ಕನ್ನ ಹಾಕಿ ಸಿನಿಮಾ ಮಾದರಿಯಲ್ಲಿ 5.78 ಕೋಟಿ ರೂ. ಕಳವು ಮಾಡಿದ ಘಟನೆ ಚೆನ್ನೈ ಬಳಿ ನಡೆದಿದೆ.
ತಮಿಳುನಾಡಿನ ಸೇಲಂ-ಚೆನ್ನೈ ಮಾರ್ಗವಾಗಿ ಚಲಿಸುವ ಸೇಲಂ ಎಕ್ಸ್ಪ್ರೆಸ್ ರೈಲಿನಲ್ಲಿ ಸೇಲಂನ ವಿವಿಧ ಬ್ಯಾಂಕುಗಳಿಂದ ಸಂಗ್ರಹಿಸಲಾದ 342 ಕೋಟಿ ರೂ. ನಗದನ್ನು ಆರ್ಬಿಐಗೆ ಸಲ್ಲಿಸುವ ಸಲುವಾಗಿ ರೈಲಿನಲ್ಲಿ ಸಾಗಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ನಗದು ಇಟ್ಟಿರುವ ಬೋಗಿಯೊಳಕ್ಕೆ ನುಗ್ಗಿರುವ ದರೋಡೆಕೋರರು ನಾಲ್ಕು ಪೆಟ್ಟಿಗೆಗಳನ್ನು ಒಡೆದಿದ್ದು, ಅದರಲ್ಲಿ ಒಂದು ಪೆಟ್ಟಿಗೆ ನಾಪತ್ತೆಯಾಗಿದೆ. ಇನ್ನೊಂದು ಪೆಟ್ಟಿಗೆಯಲ್ಲಿರುವ ಅರ್ಧ ಹಣ ಖಾಲಿಯಾಗಿದೆ. ಒಟ್ಟು 5.78 ಕೋಟಿ ರೂ. ದರೋಡೆ ಮಾಡಲಾಗಿದೆ. ಒಟ್ಟು 226 ಪೆಟ್ಟಿಗೆಗಳಲ್ಲಿ ನಗದನ್ನು ಸಾಗಿಸಲಾಗುತ್ತಿತ್ತು. ಎಂದು ಮೂಲಗಳು ತಿಳಿಸಿವೆ.
ವೃದ್ಧಾಚಲಂ ನಿಲ್ದಾಣದಲ್ಲಿ ರೈಲು ನಿಲ್ಲಿಸಿದ ಸಮಯದಲ್ಲಿ ದರೋಡೆಕೋರರು ನುಸುಳಿರಬಹುದೆಂದು ಶಂಕಿಸಲಾಗಿದೆ. ಆದರೆ ಬಿಗಿ ಭದ್ರತೆ ಇದ್ದೂ ಹಣ ದರೋಡೆಯಾಗಿರುವುದು ಹಲವು ಅನುಮಾನಗಳನ್ನು ಮೂಡಿಸಿದೆ.
ಘಟನೆ ಕುರಿತು ತನಿಖೆ ನಡೆಸಲು ರೈಲ್ವೆ ಪೊಲೀಸ್ ವಿಶೇಷ ತಂಡವನ್ನು ರಚಿಸಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರೂ ತನಿಖೆ ನಡೆಸುತ್ತಿದ್ದಾರೆ. ಸೇಲಂ ಮತ್ತು ಚೆನ್ನೈ ನಡುವಿನ ಎಲ್ಲ ಪೊಲೀಸ್ ಠಾಣೆಗಳಿಗೂ ಎಚ್ಚರಿಕೆ ಸಂದೇಶ ರವಾನಿಸಲಾಗಿದ್ದು, ಎಲ್ಲೆಡೆ ವ್ಯಾಪಕ ತನಿಖೆ ನಡೆಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.