ಮುಂಬಯಿ: ಉತ್ತರ ಮುಂಬಯಿಯ ವಾರ್ಸೋವಾ ಬೀಚ್ನಲ್ಲಿ ನೂರಾರು ಮಂದಿ ಕಾರ್ಯಕರ್ತರು ಸುಮಾರು 2,84,000 ಲಕ್ಷ ಕೆಜಿ ತ್ಯಾಜ್ಯವನ್ನು ಸಂಗ್ರಹಿಸಿದ್ದಾರೆ.
ವಿಶ್ವ ಸಂಸ್ಥೆಯ ಪ್ರತಿನಿಧಿಗಳು, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ನೇಮಿತ ‘ಸಾಗರಗಳ ಪೋಷಕ’ ಲೆವಿಸ್ ಪಗ್ ಅವರು ಮುಂಬಯಿಗೆ ಆಗಮಿಸಿ ಶನಿವಾರ ನಡೆದ 5 ಗಂಟೆಗಳ ಸ್ವಚ್ಛತಾ ಕಾರ್ಯಕ್ರಮದಲ್ಲಿ ವಾರ್ಸೋವಾ ನಿವಾಸಿ ಕಾರ್ಯಕರ್ತರ ಜೊತೆ ಸೇರಿದರು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ವಿಸ್ಲಿಂಗ್ ವುಡ್ಸ್ ಅಂತಾರಾಷ್ಟ್ರೀಯ ಫಿಲ್ಮ್ ಮತ್ತು ಟೆಲಿವಿಷನ್ ಸಂಸ್ಥೆಯ ವಿದ್ಯಾರ್ಥಿಗಳು, ಅಂಧೇರಿ ಬಾರ್ ಎಸೋಸಿಯೇಶನ್ನ ವಕೀಲರು, ಕೊಲಿ ಸಮಾಜ (ಸ್ಥಳೀಯ ಮೀನುಗಾರಿಕಾ ಸಮುದಾಯ) ಸದಸ್ಯರು, ಮತ್ತು ಅಖಿಲ ಭಾರತ ಪ್ಲಾಸ್ಟಿಟ್ ಉತ್ಪಾದನೆ ಅಸೋಸಿಯೇಶನ್ನ ಸದಸ್ಯರು ಭಾಗವಹಿಸಿದ್ದರು. ನಂತರ ಈ ತ್ಯಾಜ್ಯವನ್ನು ದಿಯೋನರ್ ತ್ಯಾಜ್ಯ ವಿಲೇವಾರಿ ಪ್ರದೇಶಕ್ಕೆ ಕೊಂಡೊಯ್ಯಲಾಯಿತು.
ವಾರ್ಸೋವಾ 2.5 ಕಿ.ಮೀ. ಉದ್ದದ ಮರಳು ತುಂಬಿದ ಬೀಚ್ ಆಗಿದ್ದು, ಈ ದಪ್ಪ ಮರಳಿನಲ್ಲಿ ಕಸ ಶೇಖರಣೆಗೊಳ್ಳುತ್ತದೆ. ಬೀಚ್ ಸ್ವಚ್ಛತಾ ವಿಷನ್ನ 43ನೇ ವಾರಾಂತ್ಯದೊಳಗೆ ಸಾರ್ವಜನಿಕರು ಸುಮಾರು 2 ಮಿಲಿಯನ್ ಕೆ.ಜಿ. ತ್ಯಾಜ್ಯವನ್ನು ಸಂಗ್ರಹಿಸಿದ್ದಾರೆ.
ಮಲಾಡ್ ಕೊಲ್ಲಿಯ ತ್ಯಾಜ್ಯ ಸಮಸ್ಯೆಯನ್ನು ಪರಿಹರಿಸಲು ಬೃಹನ್ಮುಂಬಯಿ ಮಹಾನಗರಪಾಲಿಕೆ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪೌರ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಬೀಚ್ ಸ್ವಚ್ಛಗೊಳಿಸಿದ ನಂತರ ವಾರ್ಸೋವಾ ನಿವಾಸಿ ಕಾರ್ಯಕರ್ತರು ಮಲಾಡ್ ಕೊಲ್ಲಿಗೆ ದೊನಿಯಲ್ಲಿ ಸಾಗಿ ಬೀಚ್ನಲ್ಲಿ ತೇಲುತ್ತಿರುವ ಪ್ಲಾಸ್ಟಿಕ್ ಚೀಲಗಳು ಮತ್ತು ಆಹಾರ ರ್ಯಾಪರ್ಗಳ ಸುಮಾರು 1000 ಕೆಜಿ ತ್ಯಾಜ್ಯವನ್ನು ಸಂಗ್ರಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.