ಬ್ರಿಗೇಡಿಯರ್ ಯಶ್ಪಾಲ್ ಬಕ್ಷಿ ಬಗ್ಗೆ ತಿಳಿದುಕೊಂಡವರು ಬಹಳ ಕಡಿಮೆ. ಆದರೆ ಭಾರತದ ಹೆಮ್ಮೆಯ ವೀರ ಯೋಧರಾಗಿದ್ದ ಇವರು ಯುದ್ಧದ ಸಂದರ್ಭದಲ್ಲಿ ಬಾಂಗ್ಲಾದೇಶವನ್ನು ಪ್ರವೇಶಿಸಿದ ಮೊದಲ ಸೈನಿಕ.
ಆದರೆ ದುರಾದೃಷ್ಟವೆಂದರೆ ಎರಡು ಅತೀ ಪ್ರಮುಖ ಯುದ್ಧಗಳಲ್ಲಿ ಹೋರಾಡಿ ಪ್ರಾಣವನ್ನು ಉಳಿಸಿಕೊಂಡಿದ್ದ ಯಶ್ಪಾಲ್ ತನ್ನ ಮನೆಯ ಕೆಲಸದಾಳುಗಳ ಕೈಯಲ್ಲಿ ಕೊಲೆಯಾಗಿ ಹೋದರು.
ಮೀರತ್ನಲ್ಲಿ ನಿವೃತ್ತಿ ಹೊಂದಿದ ಇವರು, ಬಳಿಕ ಅಲ್ಲೇ ಕೊಲೆಯಾಗುವವರೆಗೆ ಜೀವಿಸಿದ್ದರು. ಇವರ ಬಳಿ ಇದ್ದ ಹಣ, ವಸ್ತುಗಳನ್ನು ದೋಚುವ ಸಲುವಾಗಿ ಕೆಲಸದಾಳುಗಳು ಇವರ ಕೊಲೆ ಮಾಡಿದ್ದರು. ಅವರೊಂದಿಗೂ ದೀರ್ಘ ಕಾಲ ಹೋರಾಡಿದ್ದ ಇವರು ಬಳಿಕ ತಲೆಗೆ ಗುಂಡು ತಗುಲಿದ ಪರಿಣಾಮ ಮೃತಪಟ್ಟರು.
ಇವರ ಮಗಳು ಕಾಮಿನಿ ಮೆಹ್ತಾ ತಂದೆಯ ಅಂಗಾಂಗಗಳನ್ನು ದಾನ ಮಾಡಿದ್ದರು. ಇವರ ಅಂಗಾಂಗಗಳಿಂದ ೫ ಮಂದಿಯ ಜೀವ ಉಳಿಸಲು ಸಾಧ್ಯವಾಗಿದೆ. ಯುದ್ಧದಲ್ಲೂ ತನ್ನವರ ರಕ್ಷಣೆಗೆ ನಿಂತ ಯಶ್ಪಾಲ ಸಾವಿನ ಬಳಿಕವೂ ಇತರರ ಜೀವ ಉಳಿಸಿದರು ಎಂಬುದು ವಿಶೇಷ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.