ನವದೆಹಲಿ: ವಸುದೈವಕುಟುಂಬಕಂ ಹಾಗೂ ಲೋಕಾ ಸಮಸ್ತಾ ಸುಖಿನೋ ಭವಂತು ಎಂಬ ಭಾರತದ ವೈಶ್ವಿಕ ಮೌಲ್ಯಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ 22 ಸಮಾನ ಮನಸ್ಕ ಸಂಘಟನೆಗಳು “ಅಂತಾರಾಷ್ಟ್ರೀಯ ರಕ್ಷಾಬಂಧನ ಉತ್ಸವ ಸಮಿತಿ” ಎಂಬ ವೇದಿಕೆಯಡಿಯಲ್ಲಿ ಆಗಸ್ಟ್ 17 ರಂದು ನವದೆಹಲಿಯ ತಾಲಕೋಟ್ರಾ ಸ್ಟೇಡಿಯಂನಲ್ಲಿ ವಿಶ್ವ ರಕ್ಷಾಬಂಧನ ದಿನೋತ್ಸವವನ್ನು ಆಯೋಜಿಸಿವೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಇಂದ್ರೇಶ ಕುಮಾರ ಅವರ ಮಾರ್ಗದರ್ಶನದಲ್ಲಿ ಆಯೋಜಿತಗೊಳ್ಳಲಿರುವ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಭಾರತ ಸೇರಿದಂತೆ ವಿಶ್ವದ ಇತರ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಬಂಧುತ್ವ ಸಾರುವ ರಕ್ಷಾಬಂಧನ ಹಬ್ಬವನ್ನು ಒಂದು ಅಂತಾರಾಷ್ಟ್ರೀಯ ಕಾರ್ಯಕ್ರಮವಾಗಿ ಇದೇ ಮೊದಲ ಬಾರಿ ಆಯೋಜಿತಗೊಳ್ಳುತ್ತಿದ್ದು ಸಿದ್ಧತೆಗಳು ಭರದಿಂದ ಸಾಗಿವೆ.
ಧರ್ಮ ಸಂಸ್ಕೃತಿ ರಕ್ಷಾ ಮಂಚ್, ಮುಸ್ಲಿಂ ರಾಷ್ಟ್ರೀಯ ಮಂಚ್, ಭಾರತ್ ಟಿಬೇಟ್ ಸಹಯೋಗ ಮಂಚ್, ನೇಪಾಲಿ ಸಾಂಸ್ಕೃತಿಕ ಪರಿಷತ್ ಸೇರಿದಂತೆ 22 ಸಂಘಟನೆಗಳು ಸೇರಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.