News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಾಜ್‌ನಾಥ್ ಸಿಂಗ್ ಭಾಷಣಕ್ಕೆ ತಡೆ ನೀಡಿದ ಪಾಕ್

Rajnath

ಇಸ್ಲಾಮಾಬಾದ್ : ಆಘಾತಕಾರಿ ಬೆಳವಣಿಗೆಯಲ್ಲಿ ಪಾಕಿಸ್ಥಾನವು ಸಾರ್ಕ್ ಗೃಹ ಸಚಿವರ ಅಧಿವೇಶನದಲ್ಲಿ ಭಾರತದ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರ ಭಾಷಣಕ್ಕೆ ತಡೆ ನೀಡಲು ಪ್ರಯತ್ನಿಸಿದೆ.

ಸಾರ್ಕ್ ಸಭೆಯಲ್ಲಿ ರಾಜ್‌ನಾಥ್ ಅವರ ಭಾಷಣವನ್ನು ಚಿತ್ರೀಕರಿಸಲು ಯಾವ ಮಾಧ್ಯಮಕ್ಕೂ ಅವಕಾಶ ನೀಡಲಿಲ್ಲ. ಸಾರ್ಕ್ ಕಾನ್ಫರೆನ್ಸ್‌ನಲ್ಲಿ ರಾಜ್‌ನಾಥ್ ಅವರು ಮಧ್ಯಾಹ್ನದ ಊಟವನ್ನು ತಪ್ಪಿಸಿಕೊಂಡ ಬಳಿಕ ಈ ಘಟನೆ ನಡೆದಿದೆ.

ವಿಶೇಷವೆಂದರೆ ಪಾಕ್ ಗೃಹ ಸಚಿವ ಚೌಧರಿ ನಿಸಾರ್ ಅಲಿ ಖಾನ್ ಅವರು ಕೂಡಾ ಗೈರಾಗಿದ್ದರು.

ತಮ್ಮ ಭಾಷಣದ ವೇಳೆ ರಾಜ್‌ನಾಥ್ ಅವರು ಉಗ್ರವಾದದ ವಿರುದ್ಧ ಕಟುವಾಗಿ ಮಾತನಾಡಿದ್ದಾರೆ. ಮಾತ್ರವಲ್ಲ ಗುಡ್ ಅಂಡ್ ಬ್ಯಾಡ್ ಟೆರರಿಸಂ ಎಂಬ ಪಾಕಿಸ್ಥಾನದ ವಿಭಾಗೀಕರಣವನ್ನೂ ವಿರೋಧಿಸಿದ್ದಾರೆ.

“ಭಯೋತ್ಪಾದನೆ ಎಂದರೆ ಭಯೋತ್ಪಾದನೆ. ಅದರಲ್ಲಿ ಕೆಟ್ಟದ್ದು, ಒಳ್ಳೆಯದು ಎಂಬುದಿಲ್ಲ” ಎಂದು ಇಸ್ಲಾಮಾಬಾದ್‌ನಲ್ಲಿ ನಡೆದ ಸಭೆಯಲ್ಲಿ ನೂರಾರು ಸಾರ್ಕ್ ನಾಯಕರ ಮುಂದೆ ಸಿಂಗ್ ಹೇಳಿದ್ದಾರೆ.

ಇದು ಆತಿಥೇಯ ಪಾಕ್‌ನ್ನು ತೀವ್ರ ಮುಜುಗರಕ್ಕೊಳಪಡಿಸಿದೆ.

ಅವರು ಉಗ್ರರ ವಿರುದ್ಧವಾಗಿ ಕಟುವಾಗಿ ಮಾತನಾಡುತ್ತಾರೆ ಎಂಬ ಕಾರಣದಿಂದಾಗಿ ರಾಜ್‌ನಾಥ್ ಅವರ ಭಾಷಣಕ್ಕೆ ಅಡ್ಡಿಪಡಿಸಲು ಪಾಕಿಸ್ಥಾನ ಮುಂದಾಗಿತ್ತು ಎನ್ನಲಾಗಿದೆ.

ಹಿಜ್ಬುಲ್ ಕಮಾಂಡರ್ ಬುರ್ಹಾನ್ ವಾನಿಯನ್ನು ಹುತಾತ್ಮ ಎಂದು ಕರೆದಿರುವ ಪಾಕಿಸ್ಥಾನಕ್ಕೆ ಅದರ ನೆಲದಲ್ಲೇ ನಿಂತು ತಿರುಗೇಟು ನೀಡಿದ್ದ ರಾಜ್‌ನಾಥ್ ಉಗ್ರರನ್ನು ವೈಭವೀಕರಿಸುವುದನ್ನು ನಿಲ್ಲಿಸಬೇಕು ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top