ನವದೆಹಲಿ : ಮಹತ್ವದ ಜೆಎಸ್ಟಿ ಮಸೂದೆಯನ್ನು ಜಾರಿಗೊಳಿಸಲು ಕಳೆದ ಒಂದು ವರ್ಷದಿಂದ ಹರಸಾಹಸ ಪಡುತ್ತಿದ್ದ ಕೇಂದ್ರ ಸರ್ಕಾರಕ್ಕೆ ಕೊನೆಗೂ ಗೆಲುವಾಗಿದೆ.
ಬುಧವಾರ ರಾಜ್ಯಸಭೆಯಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿಯವರು ಜಿಎಸ್ಟಿ ಮಸೂದೆಯನ್ನು ಯಶಸ್ವಿಯಾಗಿ ಅನುಮೋದನೆಗೊಳಿಸಿದ್ದಾರೆ.
ಮಸೂದೆ ಮಂಡನೆ ಬಳಿಕ ಮಾತನಾಡಿದ ಜೇಟ್ಲಿ, ದೇಶದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಜಿಎಸ್ಟಿ ಮಸೂದೆಯನ್ನು ಜಾರಿಗೊಳಿಸಲಾಗಿದೆ. ಇದು ರಾಜ್ಯಗಳ ಅಭಿವೃದ್ಧಿ ವೇಗವನ್ನು ಹೆಚ್ಚಿಸಲಿದೆ. ಸ್ವಾತಂತ್ರ್ಯದ ಬಳಿಕ ಮಂಡನೆಯಾಗುತ್ತಿರುವ ಅತಿ ಮಹತ್ವದ ತೆರಿಗೆ ಸುಧಾರಣಾ ಮಸೂದೆ ಇದಾಗಿದೆ ಎಂದರು.
ಜಿಎಸ್ಟಿ ಮಸೂದೆ ಜಾರಿಯಿಂದ ತೆರಿಗೆ ನಷ್ಟ ಹೊಂದಿರುವ ರಾಜ್ಯಗಳಿಗೆ ಸಹಾಯಕವಾಗಲಿದೆ. ಅಲ್ಲದೆ ತೆರಿಗೆ ನಷ್ಟ ಹೊಂದಿರುವ ರಾಜ್ಯಗಳಿಗೆ ಕೇಂದ್ರದಿಂದ ಹಣಕಾಸು ನೆರವು ಸಿಗಲಿದೆ.
5 ವರ್ಷಗಳ ಕಾಲ ತೆರಿಗೆ ನಷ್ಟವನ್ನು ಕೇಂದ್ರವೇ ಭರಿಸಲಿದೆ. ಅಲ್ಲದೆ ದೇಶದಾದ್ಯಂತ ಏಕರೂಪ ಮಾರುಕಟ್ಟೆ ವ್ಯವಸ್ಥೆ ಜಾರಿಗೆ ಬರಲಿದೆ.
ದೇಶದ ಜಿಡಿಪಿ ಪ್ರಗತಿ ಶೇ. 2 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಈ ಮಸೂದೆಯ ಜಾರಿಯಿಂದ ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗಲಿದೆ ಎನ್ನಲಾಗಿದೆ.
ಮಸೂದೆ ಜಾರಿಗೆ ಸಹಕರಿಸಿದ ಎಲ್ಲಾ ಪಕ್ಷಗಳಿಗೂ ಜೇಟ್ಲಿ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಮಾತನಾಡಿ, ಕಾಂಗ್ರೆಸ್ ಜಿಎಸ್ಟಿ ಮಸೂದೆಯನ್ನು ಎಂದೂ ವಿರೋಧಿಸಿರಲಿಲ್ಲ. ಬದಲಾಗಿ ಕೆಲವೊಂದು ಬದಲಾವಣೆಗಳನ್ನು ಬಯಸಿತ್ತು ಅಷ್ಟೇ ಎಂದಿದ್ದಾರೆ.
ಜಿಎಸ್ಟಿ ಮಸೂದೆಗೆ ಕಾಂಗ್ರೆಸ್ ಸೇರಿದಂತೆ ಹಲವಾರು ಪಕ್ಷಗಳು ಬೆಂಬಲ ನೀಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.