ನವದೆಹಲಿ : ಕ್ರಿಶ್ಚಿಯನ್ನರು ಚಾರಿಟಿ ಮಾಡುತ್ತಾರೆ ಎಂಬುದು ನಿಜ. ಆದರೆ ಇದೇ ವೇಳೆ ಅವರು ಮತಾಂತರವನ್ನೂ ನಡೆಸುತ್ತಾರೆ. ಆದರೆ ಹಿಂದುಗಳು ಇಂತಹ ಕಾರ್ಯದಲ್ಲಿ ಎಂದಿಗೂ ತೊಡಗುವುದಿಲ್ಲ ಎಂದು ಯೋಗ ಗುರು ರಾಮ್ದೇವ್ ಬಾಬಾ ಹೇಳಿದ್ದಾರೆ.
ಎಂಟನೇ ಹಿಂದೂ ಆಧ್ಯಾತ್ಮ ಮತ್ತು ಸೇವಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಕ್ರಿಶ್ಚಿಯನ್ನರು ಸೇವೆ ಮಾಡುತ್ತಾರೆ. ಶಾಲೆ ಕಾಲೇಜು ಆಸ್ಪತ್ರೆಗಳನ್ನು ನಡೆಸುತ್ತಾರೆ. ಅದರೊಂದಿಗೆ ಮತಾಂತರವನ್ನೂ ನಡೆಸುತ್ತಾರೆ. ನಾವು ಯೋಗ ಕಲಿಸುವುದೂ ಸೇರಿದಂತೆ, ಹಲವಾರು ಸೇವೆಗಳನ್ನು ಮಾಡುತ್ತೇವೆ. ಆದರೆ ಒಬ್ಬನೇ ಒಬ್ಬನ ಧರ್ಮವನ್ನು ಬದಲಾಯಿಸಿಲ್ಲ. ಬದಲಾಗಿ ಆತನ ಜೀವನವನ್ನು ಬದಲಾಯಿಸಿದ್ದೇವೆ’ ಎಂದಿದ್ದಾರೆ.
ಕ್ರಿಶ್ಚಿಯನ್ನರನ್ನು ನೋಡಿ ಸೇವೆಯನ್ನು ಕಲಿಯಬೇಕು ಎನ್ನುತ್ತಾರೆ. ಆದರೆ ಲಕ್ಷಾಂತರ ಹಿಂದೂ ಸಾಧುಗಳು ಮತ್ತು ಚಾರಿಟಿಗಳು ಕೂಡಾ ಅವರಂತೆ ಸೇವೆ ಮಾಡುತ್ತಿದೆಯಲ್ಲವೇ ಎಂದಿದ್ದಾರೆ.
ಹಿಂದೂ ಧರ್ಮ ದಲಿತರೂ ಸೇರಿದಂತೆ ಇತರರೊಂದಿಗೆ ತಾರತಮ್ಯ ಮಾಡುತ್ತಿದೆ ಎಂಬ ಆರೋಪವನ್ನು ಅವರು ಇದೇ ವೇಳೆ ತಳ್ಳಿ ಹಾಕಿದ್ದಾರೆ.
ಸ್ವದೇಶೀ ಉತ್ಪನ್ನಗಳನ್ನು ಬಳಸುವಂತೆ ಕರೆ ನೀಡಿದ ಅವರು, ತನ್ನ ಪತಂಜಲಿ ಉತ್ಪನ್ನಗಳಿಂದ ಬಂದ ಲಾಭವನ್ನು ಚಾರಿಟಿಗೆ ಬಳಸಿಕೊಳ್ಳುವುದಾಗಿ ಹೇಳಿದ್ದಾರೆ
ವೇದ ಮತ್ತು ಆಧುನಿಕ ಶಿಕ್ಷಣ ನೀಡುವ ಸಲುವಾಗಿ ವಿಶ್ವವಿದ್ಯಾನಿಲಯ ಸ್ಥಾಪಿಸುವ ಯೋಜನೆಯಿದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.