ಶ್ರೀನಗರ : ಇತ್ತೀಚಿಗೆ ಕಾಶ್ಮೀರದಲ್ಲಿ ನಡೆದ ಎನ್ಕೌಂಟರ್ನಲ್ಲಿ ಬಲಿಯಾದ ಉಗ್ರರು ಮತ್ತು ನಾಗರಿಕರಿಗೆ ಗೌರವ ಸಲ್ಲಿಸುವ ಸಲುವಾಗಿ ಪ್ರತ್ಯೇಕತಾವಾದಿಗಳು ಭಾನುವಾರ ನಡೆಸಿದ ಪ್ರತಿಭಟನಾ ಸಮಾವೇಶದಲ್ಲಿ ಪಾಕಿಸ್ಥಾನದ ಉಗ್ರ ಸಂಘಟನೆ ಲಷ್ಕರ್-ಇ-ತೊಯ್ಬಾದ ಉನ್ನತ ನಾಯಕ ಅಬು ದುಜಾನ್ ಭಾಗವಹಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಸಮಾವೇಶದ ಸಂದರ್ಭ ಈತನ ಹಿಂದೆ – ಮುಂದೆ ನೂರಾರು ಜನ ಸುತ್ತುವರೆದಿದ್ದು ಭಾರತದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ಆದರೆ ಪೊಲೀಸರು ಮಾತ್ರ ಅಬು ದುಜಾನ್ ನ ಕಾಶ್ಮೀರಕ್ಕೆ ಆಗಮಿಸಿ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಎಂಬುದನ್ನು ಅಲ್ಲಗಳೆದಿದ್ದಾರೆ.
ಆದರೆ ಅಬು ದುಜಾನ್ ಸೇರಿದಂತೆ ಹಲವಾರು ಭಯೋತ್ಪಾದಕರು ಪ್ರತ್ಯೇಕತಾವಾದಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು ಎಂಬುದನ್ನು ಬಲ್ಲ ಮೂಲಗಳು ತಿಳಿಸಿವೆ.
ಆದರೆ ಈ ಮಾತನ್ನು ಸ್ಪಷ್ಟೀಕರಿಸಲು ನಮ್ಮ ಬಳಿ ಯಾವುದೇ ದಾಖಲೆಗಳು ಇಲ್ಲ. ಆದರೂ ಈ ವಿಷಯದತ್ತ ಗಮನಹರಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅದೇನೇಯಿರಲಿ, ಸಮಾವೇಶದಲ್ಲಿ ಪಾಕಿಸ್ಥಾನದ ಪರ ಮತ್ತು ಭಯೋತ್ಪಾದನೆಯ ಪರ ಘೋಷಣೆಗಳು ಮೊಳಗಿದ್ದಂತೂ ನಿಜ.
ಪುಲ್ಗಾಮಾ ಜಿಲ್ಲೆಯ ಕರಿಂಬಾದ್ ಗ್ರೇವ್ಯಾರ್ಡ್ ಸಮೀಪ ಸಮಾವೇಶ ನಡೆದಿದ್ದು ಹುರಿಯತ್ ಕಾಂಗ್ರೆಸ್ ಮುಖಂಡ ಸಯ್ಯದ್ ಅಲಿ ಶಾ ಗಿಲಾನಿ, ಮಿರವಾಜ್ ಉಮರ್ ಫಾರೂಕ್ ಮತ್ತು ಜೆಕೆಎಲ್ಎಫ್ ಮುಖ್ಯಸ್ಥ ಮೊಹಮದ್ ಯಾಸಿನ್ ಮಲಿಕ್ಜಂಟಿ ನೇತೃತ್ವದಲ್ಲಿ ಸಮಾವೇಶ ನಡೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.