ಜೈಪುರ: ಬಾಲ್ಯ ವಿವಾಹಗಳನ್ನು ತಡೆಗಟ್ಟುವ ಉದ್ದೇಶದಿಂದ ವಿವಾಹಗಳಿಗೆ ಟೆಂಟ್ ಒದಗಿಸುವ ರಾಜಸ್ಥಾನದ 47,000 ಟೆಂಟ್ ವಿತರಕರು ರಾಜಸ್ಥಾನ ಟೆಂಟ್ ಡೀಲರ್ಸ್ ಕಿರಾಯಾ ವ್ಯವಸಾಯಿ ಸಮಿತಿ ಅಡಿಯಲ್ಲಿ ಬಾಲ್ಯ ವಿವಾಹಗಳಿಗೆ ಟೆಂಟ್ ವಿತರಿಸಲು ನಿರಾಕರಿಸಿದ್ದರೆ.
ಇದನ್ನು ಖಚಿತಪಡಿಸಲು ಟೆಂಟ್ ವಿತರಕರು ವಧು ಮತ್ತು ವರರ ಜನ್ಮ ಪ್ರಮಾಣ ಪತ್ರವನ್ನು ಪಡೆಯುತ್ತಾರೆ. ಬಾಲ್ಯ ವಿವಾಹಕ್ಕೆ ಸಂಬಂಧಪಟ್ಟದ್ದು ಎಂದು ತಿಳಿದು ಬಂದಲ್ಲಿ ತಕ್ಷಣವೇ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಲಾಗುತ್ತದೆ.
ಎಪ್ರಿಲ್ ತಿಂಗಳ ಅಂತ್ಯದಲ್ಲಿ ಹಾಗೂ ಮೇ ತಿಂಗಳ ಮೊದಲ ವಾರದವರೆಗೆ ನಡೆಯುವ ಆಖಾ ತೀಜ್ ಹಬ್ಬಕ್ಕೂ ಮುನ್ನ ಗ್ರಾಮಸ್ಥರು ತಮ್ಮ ಮಕ್ಕಳನ್ನು ವಿವಾಹ ಮಾಡಿಸುವ ಪ್ರವೃತ್ತಿ ಇಂದಿಗೂ ಕಂಡು ಬರುತ್ತಿವೆ. ಬಾಲ್ಯ ವಿವಾಹದ ವಿರುದ್ಧದ ಹಲವು ಕಾನೂನು ಮತ್ತು ಶಾಸನಗಳ ಹೊರತಾಗಿಯೂ ಬಾಲ್ಯ ವಿವಾಹಗಳು ನಡೆಯುತ್ತಿವೆ. ಚಿತ್ತೋರ್ಗಢ, ದುಂಗರ್ಪುರ್, ಬಂಸ್ವಾರಾ, ಝುನ್ಝುಣು, ಸಿಕಾರ್ಲ್ ಮೊದಲೆಡೆಗಳಲ್ಲಿ ಆಖಾ ತೀಜ್ಗೂ ಮುನ್ನ ಬಾಲ್ಯ ವಿವಾಹಗಳು ನಡೆಯುತ್ತಿದ್ದು, ಇದು ಮಂಗಳಕರ ಎಂದು ಪರಿಗಣಿಸಲಾಗುತ್ತಿದೆ.
ರಾಜಸ್ಥಾನದ ಟೆಂಟ್ ವಿತರಕರು ಸಭೆ ನಡೆಸಿ ಬಾಲ್ಯ ವಿವಾಹ ಕಾರ್ಯಕ್ರಮಗಳಿಗೆ ಟೆಂಟ್ ಮತ್ತಿತರ ವಸ್ತುಗಳನ್ನು ಒದಗಿಸದಂತೆ ನಿರ್ಧಾರ ಕೈಗೊಂಡಿದ್ದಾರೆ.
ಜನರು ಟೆಂಟ್ಗಳಿಗೆ ಬೇಡಿಕೆ ಇಟ್ಟಲ್ಲಿ ವಧು, ವರರ ಪೂರ್ಣ ಮಾಹಿತಿ ಪಡೆಯಲಾಗುವುದು. ತಪ್ಪು ಮಾಹಿತಿ ನೀಡಿದಲ್ಲಿ ಪೊಲೀಸರು, ಸರ್ಕಾರಿ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ರಾಜಸ್ಥಾನ ಟೆಂಟ್ ಡೀಲರ್ಸ್ ಕಿರಾಯ ವ್ಯವಸಾಯಿ ಸಮಿತಿ ಅಧ್ಯಕ್ಷ ರವಿ ಜಿಂದಾಲ್ ಹೇಳಿದ್ದಾರೆ.
ಈ ರೀತಿ ರಾಜಸ್ಥಾನ ರಾಜ್ಯ ಸರ್ಕಾರದ ಬಾಲ್ಯ ವಿವಾಹದ ತಡೆ ಯೋಜನೆಗೆ ಬೆಂಬಲ ನೀಡಲು ಸಮಿತಿ ಮುಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.