ನವದೆಹಲಿ : ಸಂಸತ್ ಅಧಿವೇಶನ ಸೋಮವಾರ ಆರಂಭವಾಗಿದ್ದು ಈ ಅಧಿವೇಶನವು ಮೇ 13ರವರೆಗೆ ನಡೆಯಲಿದೆ. ಸಂಸತ್ನಲ್ಲಿ ಹಲವು ವಿಷಯಗಳ ಚರ್ಚೆನಡೆದು ಅಧೀವೇಶನ ಕಾವೇರಲಿದೆ. ಆಡಳಿತ ಪಕ್ಷ ಪ್ರತಿಪಕ್ಷವನ್ನು ಮತ್ತು ಪತ್ರಿಪಕ್ಷಗಳು ಆಡಳಿತ ಹೆಣೆಯಲು ತಂತ್ರ ರೂಪಿಸಿದೆ.
ಅಧಿವೇಶನದಲ್ಲಿ ಲೋಕಸಭೆಯಲ್ಲಿ 13 ಮತ್ತು ರಾಜ್ಯಸಭೆಯಲ್ಲಿ 11 ಮಸೂದೆಗಳು ಅಂಗೀಕಾರ ಪಡೆಯಲಿವೆ. ಸರಕಾರ ಈ ಮಸೂದೆಗಳ ಅಂಗೀಕಾರ ಪಡೆಯಲು ಚಿಂತನೆ ನಡೆಸಿದ್ದು, ಜಿಎಸ್ಟಿ ಮಸೂದೆ, ರೈಲ್ವೆ ಸ್ವಾಧೀನತೆ, ಹಣಕಾಸು ವಿಧೇಯಕ ಮಸೂದೆಗಳು ಅಂಗೀಕಾರ ಪಡೆಯಲು ಚಿಂತನೆ ನಡೆಸಿದೆ. ಅಲ್ಲದೇ ದೇಶದಲ್ಲಿ 10 ಬರಪೀಡಿತ ರಾಜ್ಯಗಳ ಬರ ಪರಿಹಾರ ಕಾಮಗಾರಿ ಬಗ್ಗೆ ಚರ್ಚೆ ನಡೆಸಲು ಚಿಂತನೆ ನಡೆಸಿದೆ.
ಪ್ರತಿಪಕ್ಷಗಳು ಆಡಳಿತ ಪಕ್ಷಗಳನ್ನು ಹೆಣೆಯಲು ಮತ್ತು ಇಕ್ಕಟಿಗೆ ಸಿಲುಕಿಸಲು ಉತ್ತರಾಖಂಡ್ ರಾಜ್ಯದ ಮೇಲೆ ರಾಷ್ಟ್ರಪತಿ ಆಡಳಿತ ಹೇರಿಕೆಯನ್ನು ಪ್ರಸ್ತಾಪಿಸಿ ಹೆಣೆಯಲು ತಂತ್ರ ಮತ್ತು ಚಿಂತನೆಯನ್ನು ನಡೆಸಿದೆ. ಆದರೆ ಪ್ರಸ್ತುತ ಪ್ರಕರಣ ಸರ್ವೊಚ್ಚ ನ್ಯಾಯಾಲಯದಲ್ಲಿ ಈ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ಈ ಬಗ್ಗೆ ಸಭಾಪತಿ ಮತ್ತು ಸ್ಪೀಕರ್ ಚರ್ಚೆಗೆ ನಿರಾಕರಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಪ್ರತಿಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸಲು ಇಷರತ್ ಜಹಾನ್ ನಕಲಿ ಎನ್ಕೌಂಟರ್ ಪ್ರಕರಣ ಮತ್ತು ಕೇಸರಿ ಭಯೋತ್ಪಾದೆನೆಯಲ್ಲಿ ದೋಷಾರೋಪ ಪಟ್ಟಿಯಲ್ಲಿ ಅಂದಿನ ಗೃಹಸಚಿವರು ನಡೆಸಿದ ಹಸ್ತಕ್ಷೇಪ ಮತ್ತು ಸತ್ಯ ಮರೆಮಾಚಿ ಪ್ರರಕಣವನ್ನು ತಿರುಚಿರುವ ಸಂಗತಿಯನ್ನು ಪ್ರಸ್ತಾಪಿಸಲಿದೆ. ಪಶ್ಚಿಮಬಂಗಾಳದಲ್ಲಿ ನಡೆದ ಫ್ಲೈವೋವರ ಕಳಪೆ ಕಾಮಗಾರಿಯಿಂದ ಕುಸಿತದ ಪ್ರಕರಣ, ಕೊಲ್ಲಂ ಅಗ್ನಿ ದುರಂತ ಪ್ರಕರಣ ಚರ್ಚೆಗೆ ಬರುವ ಸಾಧ್ಯಯತೆಯಿದೆ.
ಸ್ಪೀಕರ್ ಸುಮಿತ್ರಾ ಮಾಹಾನ್ ಸುಗಮ ಕಲಾಪ ನಡೆಸುವಂತೆ ಸರ್ವಪಕ್ಷದ ಸಭೆ ಕರೆದು ವಿನಂತಿಸಿದ್ದಾರೆ.
ಈ ಬಾರಿ ಸುಗುಮ ಕಲಾಪ ನಡೆಯುವುದು ಅಥವಾ ಕಲಾಪ ಬಲಿಯಾಗುವುದೋ ಎಂದು ಕಾದುನೋಡಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.