ನವದೆಹಲಿ: ರಸ್ತೆ ಅಪಘಾತಕ್ಕೆ ಒಳಗಾದವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗುವವರಿಗೆ ಸಹಾಯ ಮಾಡಲು ಮುಂದಾಗುವ ಆಟೋ ರಿಕ್ಷಾ ಚಾಲಕರಿಗೆ ದೆಹಲಿ ಸರ್ಕಾರ 2000 ರೂ. ಬಹುಮಾನ ನೀಡಲಿದೆ.
ಅಪಘಾತದ ಸಮಯದಲ್ಲಿ ಸಹಾಯಹಸ್ತ ಬೇಕಾಗುವ ಸಂದರ್ಭದಲ್ಲಿ ದೆಹಲಿಯಲ್ಲಿ ಅಂಬ್ಯುಲೆನ್ಸ್ಗಳು ಸಂತ್ರಸ್ತರ ಬಳಿ ನಿರ್ದಿಷ್ಟ ಸಮಯದೊಳಗೆ ತಲುಪಲು ಅಸಾಧ್ಯವಾಗಿದೆ. ಅಂಬ್ಯುಲೆನ್ಸ್ಗಳಿಗಿಂತ ಮುಂಚಿತವಾಗಿ ರಿಕ್ಷಾಗಳು ಘಟನಾ ಸ್ಥಳಗಳಿಗೆ ತಲುಪುತ್ತಿದ್ದು, ಆಟೋ ಚಾಲಕರು ಸಹಾಯಕ್ಕೆ ಮುಂದಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ಈ ಬಹುಮಾನ ನೀಡುವ ಕ್ರಮ ಕೈಗೊಳ್ಳಲಾಗಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ.
ಆಟೋರಿಕ್ಷಾ ಚಾಲಕರು ತಮ್ಮ ಕಾರ್ಯ ಬಿಟ್ಟು ಸಂತ್ರಸ್ಥರ ಸಹಾಯಕ್ಕೆ ಮುಂದಾಗುತ್ತಾರೆ. ಅವರ ವಸ್ತ್ರಗಳು ರಕ್ತಸಿಕ್ತವಾಗಿರುತ್ತದೆ. ಅವರ ಪರೋಪಕಾರಕ್ಕಾಗಿ ಈ ಹಣವನ್ನು ಟೋಕನ್ ಆಗಿ ನೀಡಲಾಗುತ್ತಿದೆ. ಈ ಬಹುಮಾನದ ಧನ ಐಚ್ಛಿಕವಾಗಿದ್ದು, ಜನರು ಇಚ್ಛಿಸಿದಲ್ಲಿ ಈ ಹಣವನ್ನು ಪಡೆಯಬಹುದು ಅಥವಾ ತಿರಸ್ಕರಿಸಲೂಬಹುದು ಎಂದು ಅವರು ಹೇಳಿದ್ದಾರೆ.
ದೆಹಲಿ ಸರ್ಕಾರ ಶೀಘ್ರದಲ್ಲೇ ನೋಟಿಸ್ ಜಾರಿಗೊಳಿಸಲಿದ್ದು, ರಿಕ್ಷಾ ಚಾಲಕರಿಗೆ ಬಹುಮಾನ ರೂಪದಲ್ಲಿ ನೀಡುವ ಹಣವನ್ನು ಇಂಧನ ವೋಚರ್, ಮೊಬೈಲ್ ರೀಚಾರ್ಜ್ ಹೆಸರಿನಲ್ಲಿ ಬೇಕಾದರೂ ಪಡೆಯುವಂತಾಗಬೇಕು ಎಂದು ದೆಹಲಿ ಆರೋಗ್ಯ ಕಾರ್ಯದರ್ಶಿ ತರುಣ್ ಸೇಮ್ ಹೇಳಿದ್ದಾರೆ.
ರಸ್ತೆ ಅಪಘಾತಗಳ ಸಂದರ್ಭ ಸಹಾಯಕ್ಕೆ ಮುಂದಾಗುವ ಪರೋಪಕಾರಿಗಳು ಯಾವುದೇ ಸಮಸ್ಯೆಗೆ ಸಿಲುಕದಂತೆ ಇರಲು ಸುಪ್ರೀಂ ಕೋರ್ಟ್ ಕೆಲವು ಮಾರ್ಗಸೂಚಿಗಳನ್ನು ರೂಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.