ಜೈಪುರ: ಶಾಲೆ ಮತ್ತು ಮದರಸ ಎರಡೂ ಆಗಿ ಕಾರ್ಯನಿರ್ವಹಿಸುತ್ತಿರುವ ಈ ಶಿಕ್ಷಣ ಸಂಸ್ಥೆ ಈಗ ಧಾರ್ಮಿಕ ಭಾವೈಕ್ಯತೆ ಅಂದರೆ ಏನು ಎಂಬುದನ್ನು ದೇಶಕ್ಕೆ ತೋರಿಸಿಕೊಟ್ಟಿದೆ.
ಜೈಪುರದ ರೆಹಮಾನಿ ಮಾಡೆಲ್ ಸ್ಕೂಲ್ ಈ ಹಿಂದೆ ಮದರಸಾ ಶಾಲೆಯಾಗಿತ್ತು. ಇಲ್ಲಿ 1300 ಮುಸ್ಲಿಂ ವಿದ್ಯಾರ್ಥಿಗಳಿದ್ದಾರೆ. ಇಲ್ಲಿರುವ ಪ್ರಾಂಶುಪಾಲರು ಹಿಂದೂ, ಅಷ್ಟೇ ಅಲ್ಲದೇ ಆರ್ಎಸ್ಎಸ್ ಸಂಚಾಲಿತ ಆದರ್ಶ್ ವಿದ್ಯಾ ಮಂದಿರದ ಹಿನ್ನೆಲೆಯಿಂದ ಬಂದವರು ಎಂಬುದು ವಿಶೇಷ.
ಅಲ್ಪಸಂಖ್ಯಾತ ಬಾಹುಳ್ಯವಿರುವ ಜೈಪುರದ ರಾಮ್ಗಂಜ್ ಪ್ರದೇಶದಲ್ಲಿ ಈ ಶಾಲೆಯಿದೆ. ಪ್ರಾಂಶುಪಾಲ ಕೈಲಾಶ್ ಚಂದ್ರ ಯಾದವ್ ಇಲ್ಲಿನ ಮಕ್ಕಳ ಹಾಗೂ ಶಾಲೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಮುಸ್ಲಿಂ ಮಂಡಳಿ ಈ ಶಾಲೆಯ ಉಸ್ತುವಾರಿ ಹೊಂದಿದ್ದರೂ ಇಲ್ಲಿರುವ ಬಹುತೇಕ ಶಿಕ್ಷಕರು ಹಿಂದೂಗಳು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.