ಮಂಗಳೂರು : ಜಿಲ್ಲಾ ಹಾಗೂ ತಾಲೂಕು ಪಂಚಾಯತ್ನಲ್ಲಿ ಕಾಂಗ್ರೆಸ್ ಪಕ್ಷ ತುಂಬಾ ಉತ್ತಮವಾಗಿ ಜಯಗಳಿಸಿದೆ ಎನ್ನಲಾಗದು. ಮುಖ್ಯಮಂತ್ರಿಗಳ ಸ್ವಕ್ಷೇತ್ರದ ಸೋಲನ್ನು ಮುಖ್ಯ ಮಂತ್ರಿಗಳ ಹಿನ್ನಡೆಗೆ ಕಾರಣ ಎಂದು ವರ್ಣಿಸಲು ಸಾಧ್ಯವಿಲ್ಲ. ರಾಜ್ಯದ ಜವಾಬ್ದಾರಿಯಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಅನ್ನುವುದರ ಸೂಚನೆಯನ್ನು ರಾಜ್ಯದ ಜನತೆ ಪಕ್ಷಕ್ಕೆ ನೀಡಿದಾರೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಈ ಬಾರಿ ಜಿಲ್ಲಾ ಪಂಚಾಯತ್ನಲ್ಲಿ ಹೆಚ್ಚು ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಹೇಳಿದ್ದಾರೆ.
ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ಸ್ಥಾನಗಳನ್ನು ಕಳೆದುಕೊಂಡಿವೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷ ಉತ್ತಮ ಕೆಲಸವನ್ನು ಮಾಡಿದೆ. ಕಾಂಗ್ರೇಸ್ ದಕ್ಷಿಣ ಕನ್ನಡದಲ್ಲಿ ಉತ್ತಮ ಸಾಧನೆ ಮಾಡಿದೆ. ಆದರೂ ಅಧಿಕಾರ ಕೈವಶಮಾಡಲು ಸಾಧ್ಯವಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ಸಹಿತ 7 ಜನ ಶಾಸಕರಿದ್ದಾರೆ. ಆದರೆ ಶಾಸಕರ ನಡುವೆ ಒಟ್ಟಾಗಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಮಾಲೋಚನೆ ಮತ್ತು ಸಮನ್ವಯ ಇಲ್ಲ. ಉಸ್ತುವಾರಿ ಸಚಿವರು ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನಷ್ಟೇ ಗಮನದಲ್ಲಿರಿಸಿ ಅಭಿವೃದ್ಧಿ ಕಾರ್ಯ ನಡೆಸಿದರೆ ಸಾಲದು. ಸಮಗ್ರ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನಹರಿಸಬೇಕು. 9/11, ಕುಮ್ಕಿ ಹಕ್ಕು, ಎತ್ತಿನಹೊಳೆ ಸಮಸ್ಯೆ ಬಗ್ಗೆ ಜಿಲ್ಲೆಯ ಜನರಿಗೆ ಸ್ಪಂದಿಸಲು ಸಚಿವರು ಶಾಸಕರಿಗೆ ಯಾಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಪ್ರಧಾನಿ ಅವರಿಗೆ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಿದೆಯೇ? ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಸರಿಪಡಿಸಲು ಸಾಧ್ಯವಾಗಿದೆಯೇ? ಎಂದು ಪ್ರಶ್ನಿಸುತ್ತಾ ಮುಖ್ಯಮಂತ್ರಿಗಳೇ ಎಲ್ಲಾ ಕೆಲಸಗಳನ್ನು ನೀವೇ ಮಾಡಲು ಸಾಧ್ಯವಿಲ್ಲ ನಿಮಗೆ ನಿಮ್ಮ ಸಚಿವರಿಂದ ಕೆಲಸ ಮಾಡಿಸಿ ಕೊಳ್ಳುಲು ಧೈರ್ಯವಿಲ್ಲವೇ ?ಎಂದು ಅವರು ಕುಟುಕಿದ್ದಾರೆ. ನೀವು ಸಚಿವರಿಗೆ ಅಧಿಕಾರ ನೀಡಿದ್ದೀರಿ. ಆದರೆ ಕಾರ್ಯಕರ್ತರಿಗೆ ಏನು ನೀಡಿದ್ದೀರಿ? ಇಂದು ಆ ಕಾರ್ಯಕರ್ತರು ಶ್ರಮವಹಿಸದಿದ್ದರೆ, ಈ ಫಲಿತಾಂಶವನ್ನು ನೀರೀಕ್ಷಿಸಲು ಸಾಧ್ಯವಿರುತ್ತಿರಲ್ಲಿಲ. ಆದ್ದುದರಿಂದ ಕಾರ್ಯಕರ್ತರಿಗೆ ನಿಗಮ ಮಂಡಳಿಗಳಲ್ಲಿ ಅಧಿಕಾರ ನೀಡದೇ ಇರೋದು ನ್ಯಾಯಾನಾ? ಎಂದು ಮುಖ್ಯ ಮಂತ್ರಿಗಳನ್ನು ಪ್ರಶ್ನಿಸಿದ್ದಾರೆ..
ರಾಜಕಾರಣಿಗಳಿಗೆ ಯಾವುದು ವೈಯಕ್ತಿಕ ವಿಚಾರ ಅವರು ಸಾರ್ವಜನಿಕ ಜೀವನದಲ್ಲಿರುವವರು. . ಸಿಎಂ ಸಿದ್ದರಾಮಯ್ಯ ಅವರಿಗೆ ದುಬಾರಿ ವಾಚ್ ಮತ್ತು ಕುಮಾರ ಸ್ವಾಮಿ ಅವರಿಗೆ ದುಬಾರಿ ಕಾರ್ ಇಲ್ಲದೇ ಬದುಕೊದಕ್ಕೆ ಆಗೋದೆ ಸಾಧ್ಯವಿಲ್ಲವೇ ಎಂದು ಅವರು ಹೇಳಿದ್ದಾರೆ..
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.