ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ 68ನೇ ಜನ್ಮದಿನದ ಅಂಗವಾಗಿ ಬುಧವಾರ ತಮಿಳುನಾಡಿನಾದ್ಯಂತ 6,868 ಹಿಂದೂ ದೇವಾಲಯಗಳಲ್ಲಿ ಸಸಿ ನೆಡುವ ಮೂಲಕ ಜಯಲಲಿತಾ ಅವರ ಹುಟ್ಟುಹಬ್ಬವನ್ನು ಹಿಂದೂ ಧರ್ಮ ಮತ್ತು ಧರ್ಮಾರ್ಥ ದತ್ತಿ ಇಲಾಖೆ ಆಚರಿಸಲಿದೆ.
ತಮಿಳುನಾಡಿನಾದ್ಯಂತ ಇರುವ ಶೈವ ದೇವಾಲಯಗಳಲ್ಲಿ ವಿಲ್ವಂ (ಬಿಲ್ವ) ಹಾಗೂ ವೈಷ್ಣವ ದೇವಾಲಯಗಳಲ್ಲಿ ಪುಣ್ಣಾಯ್ ಮತ್ತು ಮಗಿಝಂ ಸಸಿಗಳನ್ನು ನೆಡಲು ವ್ಯವಸ್ಥೆ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.
ತಮಿಳುನಾಡಿನಾದ್ಯಂತ 32 ಜಿಲ್ಲೆಗಳ 6,686 ದೇವಾಲಯಗಳಲ್ಲಿ ಸುಮಾರು 68 ಲಕ್ಷ ಸಸಿಗಳನ್ನು ನೆಡುವ ಯೋಜನೆ ಮಾಡಲಾಗಿದ್ದು, ಶೈವ ಮತ್ತು ವೈಷ್ಣವ ದೇವಾಲಯಗಳಲ್ಲಿ ಈ ಮರಗಳನ್ನು ಕಾಣಬಹುದು. ಕಾಕತಾಳೀಯವೆಂಬಂತೆ ಜಯಲಲಿತಾ ಅವರ ಜನ್ಮ ನಕ್ಷತ್ರವೂ ಇದೇ ದಿನ ಬರುವುದರಿಂದ ನಿನ್ನೆ ಅವರ ಜನ್ಮದಿನಾಚರಣೆಯ ಪೂರ್ವಭಾವಿಯಾಗಿ 122 ದೇವಸ್ಥಾನಗಳಲ್ಲಿ ವಿಶೇಷ ಪ್ರಾರ್ಥನೆಯನ್ನು ನಡೆಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.