ನವದೆಹಲಿ: ದೇಶದ ಪ್ರಾಚೀನ ಭಾಷೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪಠ್ಯಪುಸ್ತಕಗಳು ಸಂಸ್ಕೃತದಲ್ಲಿ ಲಭ್ಯವಾಗುವಂತೆ ಮಾಡಿ ಸಂಸ್ಕೃತದಲ್ಲೇ ಬೋಧನೆ ಮಾಡುವಂತೆ ಆಗಬೇಕು ಎಂದು ಮಾನವ ಸಂಪ್ಮೂಲ ಸಚಿವಾಲಯದ ತಜ್ಞರ ಸಮಿತಿಯೊಂದು ಶಿಫಾರಸು ಮಾಡಿದೆ.
ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ನೇತೃತ್ವದ ೧೩ ಮಂದಿಯ ತಜ್ಞರ ಸಮಿತಿ ಭಾರತದ ಪ್ರಾಚೀನ ಭಾಷೆಯಲ್ಲಿ ಜನರು ಆಸಕ್ತಿ ತೋರುವಂತೆ ಆಗಬೇಕು ಎಂದು ಹೇಳಿದೆ.
ಸಂಸ್ಕೃತ ಭಾಷೆಯನ್ನು ಪ್ರದೇಶಿಕ ಭಾಷೆಯ ಬದಲು ಸಂಸ್ಕೃತದಲ್ಲೇ ಕಲಿಸಬೇಕು. ಅಧ್ಯಾಪಕರು ವಿದ್ಯಾರ್ಥಿಗಳೊಂದಿಗೆ ಸಂಸ್ಕೃತದಲ್ಲಿ ಸಂಭಾಷಣೆ ನಡೆಸಲು ತರಬೇತಿ ನೀಡುವುದು, ವಿದ್ಯಾರ್ಥಿಗಳಿಗೆ ಸಂಸ್ಕೃತವನ್ನು ಆಯ್ಕೆ ಭಾಷೆಯಾಗಿ ಕಲ್ಪಿಸುವ ಬಗ್ಗೆ ಈ ವೇಳೆ ಚರ್ಚಿಸಲಾಗಿದೆ.
ವೇದ ಮತ್ತು ಸಂಸ್ಕೃತ ಬೋಧಿಸುವ ಹಲವಾರು ಸಾಂಸ್ಕರತಿಕ ಸಂಸ್ಕೃತ ಪಠಶಾಲೆಗಳಿವೆ. ಈ ವಿದ್ಯಾಥಿಗಳು ಗಣಿತ, ವಿಜಜ್ಞಾನ ಮುಂತಾದ ಪಠ್ಯಗಳನ್ನು ಸಂಸ್ಕೃತದಲ್ಲೇ ಕಲಿಯುತ್ತಿದ್ದು ೧೦, ೧೨ನೇ ತರಗತಿ ಕಲಿಯಲು ಇತರ ಶಾಲೆಗಳಿಗೆ ಹೋದ ಸಂದರ್ಭ ಸಮಸ್ಯೆ ಉಂಟಾಗುತ್ತದೆ ಎಂದು ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ಕುಲಪತಿ ಹಾಗೂ ಮಾಜಿ ಚುನಾವಣಾಧಿಕಾರಿ ಎನ್. ಗೋಪಾಲನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.