News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಿಂಗಾಪುರದ ಸಂಸ್ಥಾಪಕ ಲೀ ನಿಧನ: ಮೋದಿ ಸಂತಾಪ

leeಸಿಂಗಾಪುರ: ಸಿಂಗಾಪುರದ ಸಂಸ್ಥಾಪಕ ಪಿತಾಮಹ ಮತ್ತು ಅದರ ಮೊದಲ ಪ್ರಧಾನಿ, ಚಿಕ್ಕ ದ್ವೀಪವಾಗಿದ್ದ ಸಿಂಗಾಪುರವನ್ನು ಶ್ರೀಮಂತ ದೇಶವನ್ನಾಗಿ ಪರಿವರ್ತಿಸಿದ್ದ ಲೀ ಕ್ವಾನ್ ಯೀವ್ ಸೋಮವಾರ ಮುಂಜಾನೆ ವಿಧಿವಶರಾಗಿದ್ದಾರೆ.

ಕಳೆದ 6 ವಾರಗಳಿಂದ ನ್ಯೂಮೋನಿಯಾದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ 3.31ರ ಸುಮಾರಿಗೆ ಸಿಂಗಾಪುರದ ಜನರಲ್ ಆಸ್ಪತ್ರೆಯಲ್ಲಿ ದೈವಾಧೀನರಾದರು.

91 ವರ್ಷದ ತನ್ನ ದೇಶದ ಶಿಲ್ಪಿಯನ್ನು ಕಳೆದುಕೊಂಡಿರುವ ಸಿಂಗಾಪುರದ ಜನತೆ ಕಂಬನಿ ಮಿಡಿಯುತ್ತಿದ್ದಾರೆ.

ಬ್ರಿಟಿಷರಿಂದ ತನ್ನ ದೇಶ ಬಂಧಮುಕ್ತವಾದ ಬಳಿಕ 1959ರಿಂದ 1990ರವರೆಗೆ ಲೀ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಇವರ ಕಾಲದಲ್ಲಿ ಸಿಂಗಾಪುರ ಅತ್ಯಂತ ಶ್ರೀಮಂತ ರಾಷ್ಟ್ರವಾಗುವತ್ತ ದಾಪುಗಲಿಟ್ಟಿತು.

ಲೀ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪವ್ಯಕ್ತಪಡಿಸಿದ್ದಾರೆ. ’ಅವರೊಬ್ಬ ದೂರದೃಷ್ಟಿಯುಳ್ಳ ಮುತ್ಸದ್ಧಿ ಮತ್ತು ನಾಯಕರುಗಳಲ್ಲಿ ಸಿಂಹವಾಗಿದ್ದರು’ ಎಂದು ಟ್ವಿಟ್ ಮಾಡಿದ್ದಾರೆ.

ವಿಶ್ವನಾಯಕರುಗಳೂ ಲೀ ಅಗಲುವಿಕೆಗೆ ಸಂತಾಪ ಸೂಚಿಸಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.