News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೊಂಡೆವೂರಿನಲ್ಲಿ ಚತುರ್ವೇದ ಯಾಗ: ಪುತ್ತೂರಿನಿಂದ ಮಾ.25 ರಂದು ಹೊರೆಕಾಣಿಕೆ

downloadಪುತ್ತೂರು : ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಮಾ.21ರಿಂದ ನಡೆಯುವ ಚತುರ್ವೇದ ಸಂಹಿತಾ ಯಾಗ, ಬೃಹತ್ ಗಾಯತ್ರೀ ಘೃತ ಸಂಪ್ರಾಪ್ತಿ ಮಹಾಯಾಗದ ಪ್ರಯುಕ್ತ ಮಾ.25ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ಸಭಾಭವನದಿಂದ ಹೊರಡಲಿದೆ ಎಂದು ಹೊರೆಕಾಣಿಕೆ ಸಮಿತಿ ಅಧ್ಯಕ್ಷ ಮುರಳೀಕೃಷ್ಣ ಹಸಂತಡ್ಕ ಹೇಳಿದರು.

ಅವರು ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.ಗಾಯತ್ರೀ ಘೃತ ತಯಾರಿಕೆಯಲ್ಲಿ ಉಪಯೋಗಿಸುವ ಆಯುರ್ವೇದ ಗಿಡಮೂಲಿಕೆಗಳಾದ ಅಮೃತಬಳ್ಳಿ, ಕೇಪುಳ ಹೂ, ಹಾರಮುನಿ ಬೇರು ಸಹಿತ, ಹಿಪ್ಪಲಿ ಕಾಂಡ ಸಹಿತ, ಜಾಜಿ ಮಲ್ಲಿಗೆ ಗಿಡ/ ಕಾಂಡ, ಗರಿಕೆ ಹುಲ್ಲು, ಶಂಖಪುಷ್ಪ ಹೂ ಹಾಗೂ ಗಿಡ, ಒಂದೆಲಗ, ಬ್ರಾಹ್ಮೀ, ನೆಲನೆಲ್ಲಿ (ಬಿಳಿ), ಕೃಷ್ಣ ತುಳಸಿ ಹಾಗೂ ಹೋಮಕ್ಕೆ ಬೇಕಾಗುವ ಇತರ ಸಮಿತ್ತುಗಳಾದ ಅತ್ತಿ, ಇತ್ತಿ, ಗೋಳಿ, ಅಶ್ವತ್ಥ, ಪಾಲಾಶ ಇವುಗಳನ್ನು ಒಂದು ಗೇಣು ಉದ್ದದಲ್ಲಿ, ಸೀಳದೆ ತರಬೇಕು, ತರಕಾರಿ, ತೆಂಗಿನಕಾಯಿ, ಬೆಲ್ಲ, ತುಪ್ಪ, ಅಕ್ಕಿ ಇತ್ಯಾದಿಗಳನ್ನು ಮಾ.24 ರ ಸಂಜೆ 6 ಗಂಟೆ ಮುಂಚಿತವಾಗಿ ಶ್ರೀ ಮಹಾಲಿಂಗೇಶ್ವರ ಸಭಾಭವನ, ಪುತ್ತೂರು ಧರಿತ್ರಿ ಅಸೋಸಿಯೇಟ್ಸ್ ಅಥವಾ ಏಳ್ಮುಡಿ ಶ್ರೀ ರಾಮ ಆಯಿಲ್ ಮಿಲ್‌ಗೆ ತಲುಪಿಸುವಂತೆ ಅವರು ಭಕ್ತಾದಿಗಳಲ್ಲಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಹೊರೆಕಾಣಿಕೆ ಸಮಿತಿ ಗೌರವಾಧ್ಯಕ್ಷ ನನ್ಯ ಅಚ್ಚುತ ಮುಡೆತ್ತಾಯ, ಕಾರ್ಯದರ್ಶಿ ಸಂತೋಷ ಬೋನಂತಾಯ ಉಪಸ್ಥಿತರಿದ್ದರು.

 

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top