ನವದೆಹಲಿ: ತನ್ನ ದೇಶ ಉಗ್ರರಿಗೆ ಬೆಂಬಲ ಮತ್ತು ತರಬೇತಿ ನೀಡಿದೆ ಎಂಬ ಪಾಕಿಸ್ಥಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಶರಫ್ ಹೇಳಿಕೆಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಕೊನೆಗೂ ಪಾಕಿಸ್ಥಾನದ ಸತ್ಯ ಹೊರಬಂದಿದೆ ಎಂದಿದೆ.
ಮುಶರಫ್ ಹೇಳಿಕೆಯ ಬಳಿಕ ಪಕ್ಷಬೇಧ ಮರೆತು ಎಲ್ಲಾ ರಾಜಕೀಯ ನಾಯಕರುಗಳು ಪಾಕಿಸ್ಥಾನದ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೇ ತನ್ನ ನೆಲದಲ್ಲಿರುವ ಭಯೋತ್ಪಾದಕರನ್ನು ಭಾರತಕ್ಕೆ ಒಪ್ಪಿಸುವಂತೆ ಆ ದೇಶಕ್ಕೆ ಆಗ್ರಹಿಸಿದ್ದಾರೆ.
‘ಕೊನೆಗೂ ಆತ ಸತ್ಯ ಮಾತನಾಡಿದ, ನಿಜಕ್ಕೂ ಅವರು ಉಗ್ರರ ವಿರುದ್ಧ ಹೋರಾಡಲು ಆಸಕ್ತಿ ಹೊಂದಿದ್ದರೆ, ಧ್ವನಿಯೆತ್ತರಿಸಿ ಮಾತನಾಡಬೇಕು, ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಿದ್ದ ಕೆಲ ಉಗ್ರರನ್ನು ನಮಗೆ ಒಪ್ಪಿಸಬೇಕು’ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಆಗ್ರಹಿಸಿದ್ದಾರೆ.
ದಾವೂದ್ ಇಬ್ರಾಹಿಂಗೂ ಅವರು ಆಶ್ರಯ ನೀಡಿದ್ದರು ಎಂಬುದನ್ನು ಮುಶರಫ್ ಸ್ಪಷ್ಟಪಡಿಸಿದ್ದಾರೆ, ಜವಾಬ್ದಾರಿಯನ್ನು ಅರಿತು ಈಗಲಾದರೂ ಆತನನ್ನು ಒಪ್ಪಿಸಬೇಕು’ ಎಂದಿದ್ದಾರೆ.
ಮುಶರಫ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ‘ಹೇಗೆ ನಾಯಕರಿರುತ್ತಾರೋ ಹಾಗೆಯೇ ಜನರೂ ಇರುತ್ತಾರೆ’ ಎಂದಿದ್ದಾರೆ.
ಪಾಕಿಸ್ಥಾನ ಭಯೋತ್ಪಾದಕರ ಮನೆಯಾಗಿದೆ ಎಂಬುದು ಮಶರಫ್ ಹೇಳಿಕೆಯಿಂದ ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.