News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಸಬ್ ಬಿರಿಯಾನಿ ಕೇಳಿಯೇ ಇರಲಿಲ್ಲ: ಉಜ್ವಲ್ ನಿಕ್ಕಂ

ujwalಜೈಪುರ: 26/11ರ ಮುಂಬಯಿ ದಾಳಿಯ ಪ್ರಮುಖ ಅಪರಾಧಿ ಅಜ್ಮಲ್ ಕಸಬ್ ಜೈಲಿನಲ್ಲಿ ಮಟನ್ ಬಿರಿಯಾನಿ ಕೇಳಿದ್ದಾನೆ ಎಂಬುದು ಸುಳ್ಳು ಮತ್ತು ಉಗ್ರರ ಪರವಾಗಿ ಕೆಲವರಿಗೆ ಇದ್ದ ಮೃದು ಭಾವನೆಯನ್ನು ಹೊಗಲಾಡಿಸುವ ಸಲುವಾಗಿ ಇಂತಹ ಉಹಾಪೋಹವನ್ನು ಎಬ್ಬಿಸಿದೆವು ಎಂದು ಪ್ರಕರಣದಲ್ಲಿನ ಸರ್ಕಾರಿ ಪರ ವಕೀಲ ಉಜ್ವಲ್ ನಿಕ್ಕಂ ಹೇಳಿದ್ದಾರೆ.

ಕಸಬ್ ಬಿರಿಯಾನಿಯನ್ನು ಎಂದೂ ಕೇಳಿಲ್ಲ ಮತ್ತು ಆತನಿಗೆ ಬಿರಿಯಾನಿಯನ್ನು ಸರ್ಕಾರ ನೀಡಿಯೂ ಇಲ್ಲ. ವಿಚಾರಣೆಯ ಸಂದರ್ಭ ಕಸಬ್ ಪರವಾಗಿ ಬೀಸುತ್ತಿದ್ದ ಭಾವನಾತ್ಮಕ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಈ ಸುಳ್ಳು ಸುದ್ದಿಯನ್ನು ಹರಡಿದೆವು ಎಂದಿದ್ದಾರೆ.

ರಕ್ಷಾಬಂಧನದಂದು ಕಸಬ್ ತನ್ನ ತಂಗಿಯನ್ನು ನೆನೆದು ಕಣ್ಣಿರಿಟ್ಟಿದ್ದ ಎಂಬ ಎಂದು  ಮಾಧ್ಯಮಗಳು ಸುದ್ದಿ ಹಬ್ಬಿಸಿದವು. ಇದರಿಂದ ಕಸಬ್ ಬಗ್ಗೆ ಮೃದುಧೋರಣೆಗಳು ವ್ಯಕ್ತವಾದವು. ಕೆಲವರಂತೂ ಆತ ಉಗ್ರನೇ ಅಥವಾ ಅಲ್ಲವೇ ಎಂದು ಪ್ರಶ್ನೆ ಕೇಳಲಾರಂಭಿಸಿದರು. ಈ ರೀತಿಯ ಭಾವನಾತ್ಮಕ ಅಲೆ ಮತ್ತು ಸನ್ನಿವೇಶಗಳನ್ನು ನಿಲ್ಲಿಸಬೇಕಾಗಿತ್ತು, ಹೀಗಾಗಿ ನಾನು ಕಸಬ್ ಜೈಲಿನಲ್ಲಿ ಮಟನ್ ಬಿರಿಯಾನಿ ಕೇಳುತ್ತಿದ್ದಾನೆ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದೆ’ ಎಂದು ನಿಕ್ಕಂ ಹೇಳಿದ್ದಾರೆ.

‘ನಾನ್ಯಾವಾಗ ಈ ರೀತಿಯ ಹೇಳಿಕೆ ನೀಡಿದೆನೋ ಮಾಧ್ಯಮಗಳು ಅದನ್ನೇ ದೊಡ್ಡ ಸುದ್ದಿ ಮಾಡಿದವು. ಈ ಬಗ್ಗೆ ಪ್ಯಾನೆಲ್ ಡಿಸ್ಕಷನ್ ನಡೆಸಿದವು. ಬಿರಿಯಾನಿ ಕೇಳಿದ ಕಸಬ್ ಬಗ್ಗೆ ಅಸಹನೆ ವ್ಯಕ್ತಪಡಿಸಿದವು ಆದರೆ ಕಸಬ್ ಬಿರಿಯಾನಿ ಕೇಳಿಯೇ ಇಲ್ಲ ಎಂಬುದೇ ಸತ್ಯವಾಗಿತ್ತು’ ಎಂದಿದ್ದಾರೆ.

ಮುಂಬಯಿ ದಾಳಿಯಲ್ಲಿ ಜೀವಂತವಾಗಿ ಸೆರೆಸಿಕ್ಕ ಏಕೈಕ ಉಗ್ರ ಕಸಬ್‌ನಾಗಿದ್ದು. ಘಟನೆ ನಡೆದು ನಾಲ್ಕು ವರ್ಷಗಳ ಬಳಿಕ ಆತನನ್ನು ಗಲ್ಲುಶಿಕ್ಷೆಗೆ ಒಳಪಡಿಸಲಾಗಿತ್ತು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top