ಕಠ್ಮಂಡು : ಭಾರೀ ಮಳೆ ಮತ್ತು ಪ್ರತಿಕೂಲ ಹವಾಮಾನದ ಹಿನ್ನಲೆಯಲ್ಲಿ ಭಾರತದ ಸುಮಾರು 1500 ಮಾನಸ ಸರೋವರ ಕೈಲಾಸ ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೇಪಾಳದ ಪರ್ವತ ಪ್ರದೇಶದಲ್ಲಿ ಇವರು ಸಿಲುಕಿಕೊಂಡಿದ್ದು ಇದೀಗ ಇವರ ಸಹಾಯಕ್ಕೆ ಭಾರತೀಯ ರಾಯಭಾರ ಕಛೇರಿ ಆಗಮಿಸಿದೆ. ಭಾರತೀಯ ಯಾತ್ರಾರ್ಥಿಗಳ ಸಹಾಯಕ್ಕೆಂದು ನೇಪಾಳದಲ್ಲಿನ ಭಾರತೀಯ ರಾಯಭಾರಿ ಕಛೆರಿಯು ಸಹಾಯವಾಣಿಯನ್ನು ಆರಂಭಿಸಿದೆ.
ಸಂಕಷ್ಟದಲ್ಲಿರುವ ಕುಟುಂಬಿಕರು +977-9851107006, +977-9851155007, +977-9851107021, +977-9818832398 ಸಹಾಯವಾಣಿಯನ್ನು ಮತ್ತು ಹಾಟ್ಲೈನ್ ಸಂಖ್ಯೆ ಕನ್ನಡಕ್ಕಾಗಿ +977-9823672371, ತೆಲುಗು +977-9808082292, ತಮಿಳು +977-9808500642, ಮಲಯಾಳಂ +977-9808500644 ಗಳನ್ನು ಸಂಪರ್ಕಿಸಿ, ತಮ್ಮವರ ಸ್ಥಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಈ ಸಹಾಯವಾಣಿಯು ಕನ್ನಡ, ತೆಲುಗು, ಮಲಯಾಳಂ, ತಮಿಳು ಭಾಷೆಗಳಲ್ಲಿ ಲಭ್ಯವಿದೆ.
ಈಗಾಗಲೇ ರಾಯಭಾರಿ ಕಛೇರಿಯು ತಂಡಗಳನ್ನು ಕಳುಹಿಸಿ ಅಲ್ಲಲ್ಲಿ ಸಿಲುಕಿಕೊಂಡಿರುವವರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದೆ. ಅಲ್ಲದೆ ಪರಿಸ್ಥಿತಿಯನ್ನು ಅವಲೋಕನ ಮಾಡುತ್ತಿದೆ.
ಭಾರತೀಯ ರಾಯಭಾರಿ ಕಛೇರಿ ಮಾಹಿತಿ ಪ್ರಕಾರ 525 ಯಾತ್ರಾರ್ಥಿಗಳು ಸಿಮಿಕೋಟ, 550 ಯಾತ್ರಾರ್ಥಿಗಳು ಹಿಲ್ಸಾ ಮತ್ತು 500 ಯಾತ್ರಾರ್ಥಿಗಳು ಟಿಬೆಟ್ ಭಾಗದಲ್ಲಿದ್ದಾರೆ ಎನ್ನಲಾಗಿದೆ.
ಜುಲೈ 3 ರಂದು ಪ್ರಕೃತಿ ಕೈ ಕೊಟ್ಟ ಹಿನ್ನಲೆಯಲ್ಲಿ ಮಾನಸ ಸರೋವರ ಯಾತ್ರಿಕರು ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ನೇಪಾಳ ಸೇನಾ ಹೆಲಿಕಾಫ್ಟರ್ಗಳನ್ನು ಬಳಸಿ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕುರಿತು ಪ್ರಯತ್ನಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.