ತಿರುವನಂತಪುರಂ: ಜನರ ಧಾರ್ಮಿಕ ನಂಬಿಕೆಗಳನ್ನು ನಾನಾ ರೀತಿಯಲ್ಲಿ ದುರುಪಯೋಗಪಡಿಸಿಕೊಳ್ಳುವ ದುರುಳರು ನಮ್ಮ ಸಮಾಜದಲ್ಲಿದ್ದಾರೆ. ಇವರ ಬಗ್ಗೆ ತಿಳಿದುಕೊಂಡು ಎಚ್ಚರಿಕೆಯ ಹೆಜ್ಜೆ ಇಡುವುದು ಪ್ರತಿಯೊಬ್ಬ ಆಸ್ತಿಕನ ಅರಿವಿನಲ್ಲಿರಬೇಕಾದ ವಿಷಯ. ದೇವರು ಮತ್ತು ನಮ್ಮ ನಡುವೆ ಮಧ್ಯವರ್ತಿಯನ್ನು ತರುವ ಮುನ್ನ ಎಲ್ಲರು ಕೊಂಚ ಯೋಚಿಸಬೇಕಾಗಿದೆ. ಕೇರಳದ ಚರ್ಚ್ ವೊಂದರಲ್ಲಿ ರಹಸ್ಯ ತಪ್ಪೊಪ್ಪಿಗೆಯನ್ನೇ ಬ್ಲ್ಯಾಕ್ಮೇಲ್ ದಂಧೆಯನ್ನಾಗಿಸಿದ ಐವರು ಪಾದ್ರಿಗಳನ್ನು ಉಚ್ಛಾಟನೆಗೊಳಿಸಲಾಗಿದೆ.
ಮಾಡಿದ ತಪ್ಪನ್ನು ಪಾದ್ರಿಗಳ ಮುಂದೆ ರಹಸ್ಯವಾಗಿ ಹೇಳಿ ದೇವರ ಕ್ಷಮೆ ಬಯಸುತ್ತಿದ್ದ ಜನರು ಈಗ ಪೇಚಿಗೆ ಸಿಲುಕಿಕೊಂಡಿದ್ದಾರೆ. ಭಕ್ತರ ರಹಸ್ಯವನ್ನು ತಿಳಿದುಕೊಂಡು ಪಾದ್ರಿಗಳು ಅವರಿಗೆ ಬ್ಲ್ಯಾಕ್ಮೇಲ್ ಮಾಡುತ್ತಿರುವ ಮತ್ತು ಮಹಿಳೆಯರನ್ನು ಲೈಂಗಿಕ ದೌರ್ಜನ್ಯಕ್ಕೀಡು ಮಾಡುತ್ತಿರುವ ವಿಷಯ ಈಗ ಬಹಿರಂಗಗೊಂಡಿದೆ. ಇದೇ ಕಾರಣಕ್ಕೆ ಚರ್ಚ್ ಐವರು ಪಾದ್ರಿಗಳನ್ನು ಉಚ್ಛಾಟನೆಗೊಳಿಸಿದೆ.
ಪಾದ್ರಿಯೊಬ್ಬನಿಂದ ಲೈಂಗಿಕ ದೌರ್ಜನ್ಯಕ್ಕೀಡಾದ ಬಗ್ಗೆ ಮಹಿಳೆಯೊಬ್ಬಳು ಇನ್ನೊಬ್ಬ ಪಾದ್ರಿಯ ಬಳಿ ರಹಸ್ಯವಾಗಿ ಹೇಳಿದ್ದಳು. ಆಕೆಯ ಸಮಸ್ಯೆಯನ್ನು ನಿವಾರಿಸುವ ಬದಲು ಆತ ಆಕೆಯನ್ನು ಇನ್ನಷ್ಟು ದುರುಪಯೋಗಪಡಿಸಿಕೊಂಡ, ಮಾತ್ರವಲ್ಲ ಮತ್ತೊಂದು ಪಾದ್ರಿಗೂ ಆಕೆಯ ವಿಷಯ ತಿಳಿಸಿ ಆತನಿಂದಲೂ ಅನ್ಯಾಯವಾಗುವಂತೆ ಮಾಡಿದ ಎಂದು ಹೇಳಲಾಗಿದೆ. ಈ ವಿಷಯವನ್ನು ಮಹಿಳೆಯ ಪತಿ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿದ ಬಳಿ ಎಚ್ಚೆತ್ತ ಚರ್ಚ್ ಪಾದ್ರಿಗಳನ್ನು ಉಚ್ಛಾಟಿಸಿ, ಪ್ರಕರಣದ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಹೇಳಿದೆ. ಆದರೆ ಇದುವರೆಗೆ ಪೊಲೀಸರಿಗೆ ದೂರು ನೀಡಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.