ಮಂಗಳೂರು: ಪಶ್ಚಿಮ ಘಟ್ಟಗಳ ಪರಿಸರವನ್ನು ಉಳಿಸಿ ಬೆಳೆಸುವ ಸಲುವಾಗಿ ಎನ್ಇಸಿಎಫ್(ನ್ಯಾಷನಲ್ ಎನ್ವಿರಾನ್ಮೆಂಟ್ ಕೇರ್ ಫೆಡರೇಶನ್) ವತಿಯಿಂದ ಜೂನ್ 24ರ ಭಾನುವಾರ ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜನೆಗೊಳಿಸಲಾಗಿದೆ.
ಪಶ್ಚಿಮ ಘಟ್ಟಗಳ ರಕ್ಷಿತಾರಣ್ಯದಲ್ಲಿ ಪ್ರಾಣಿ, ಪಕ್ಷಿ, ಮನುಷ್ಯರಿಗೆ ಪ್ರಯೋಜನಕಾರಿಯಾದ ಮಾವು, ಹಲಸು, ಚಾರ, ಪುನರ್ಪುಳಿ, ಅಂಡೆಪುಳಿ, ವಾಟೆ ಮುಂತಾದ 500 ಹಣ್ಣು ಬಿಡುವ ಗಿಡಗಳನ್ನು ನಡೆಲು ಯೋಜನೆ ರೂಪಿಸಲಾಗಿದೆ.
ಆಸಕ್ತರು ಈ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ಭಾಗಿಯಾಗಬಹುದು. ಮೊದಲು ನೋಂದಣಿ ಮಾಡಿಕೊಂಡ 50 ಮಂದಿಗೆ ಇದರಲ್ಲಿ ಭಾಗವಹಿಸುವ ಅವಕಾಶ ಇದೆ. 10 ಗಿಡಗಳಿಗೆ ತಗಲುವ 5 ರೂಪಾಯಿ ವೆಚ್ಚವನ್ನು ಭರಿಸಬೇಕಾಗುತ್ತದೆ. ಗಿಡವನ್ನು ಸ್ಥಳಕ್ಕೆ ಅರಣ್ಯ ಇಲಾಖೆ ಒದಗಿಸುತ್ತದೆ.
ಬೆಳ್ತಂಗಡಿಯ ಮುಖಾಂತರ ಪಶ್ಚಿಮ ಘಟ್ಟಕ್ಕೆ ತೆರಳಲಾಗುತ್ತಿದ್ದು, ಬಸ್ನ ವ್ಯವಸ್ಥೆಯನ್ನು ಬರ್ಕೆ ಫ್ರೆಂಡ್ಸ್ ಮಾಡಿದ್ದಾರೆ. ಮಧ್ಯಾಹ್ನದ ಊಟದ ವ್ಯವಸ್ಥೆ ಇದೆ.
ಕೊಡೆ, ರೈನ್ಕೋಟ್, ಔಷಧಿಗಳನ್ನು ಭಾಗವಹಿಸುವವರೇ ತರಬೇಕಾಗುತ್ತದೆ ಎಂದು ಎನ್ಇಸಿಎಫ್ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಸಂಪರ್ಕಿಸಬೇಕಾದ ಸಂಖ್ಯೆ: ಅವಿನಾಶ್:- 9449468643 ; ಸಚಿನ್- 9741884951.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.