ದಂತೇವಾಡ: ಪ್ಲಾಸ್ಟಿಕ್ ಪರಿಸರಕ್ಕೆ, ನಮ್ಮ ಆರೋಗ್ಯಕ್ಕೆ ಮಾರಕ ಎಂದು ತಿಳಿದಿದ್ದರೂ ಅದನ್ನು ಸಂಪೂರ್ಣವಾಗಿ ತ್ಯಜಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಸಾಧ್ಯವಾಗಿದೆ. ಆದರೂ ಛತ್ತೀಸ್ಗಢದ ದಂತೇವಾಡ ಜಿಲ್ಲೆಯ ಕುಟುಂಬವೊಂದು ಕಳೆದ 4 ವರ್ಷದಿಂದ ಪ್ಲಾಸ್ಟಿಕ್ ಬಳಕೆ ಮಾಡದೆಯೇ ಜೀವನ ನಡೆಸುತ್ತಿದೆ.
ಭೂಮಿಯನ್ನು ಸ್ವಚ್ಛ ಮತ್ತು ಸುಂದರವಾಗಿಡುವ ಉದ್ದೇಶದೊಂದಿಗೆ ಪ್ಲಾಸ್ಟಿಕ್ ಬ್ಯಾಗ್ ಸೇರಿದಂತೆ ಹಲವು ವಸ್ತುಗಳನ್ನು ಕಳೆದ ನಾಲ್ಕು ವರ್ಷದಿಂದ ತ್ಯಜಿಸಿದ್ದೇವೆ ಎಂದು ಈ ಕುಟುಂಬದ ಸದಸ್ಯ ಮಹೇಂದ್ರ ಭಾರಧ್ವಜ್ ಹೇಳುತ್ತಾರೆ.
‘ಪ್ಲಾಸ್ಟಿಕ್ನ ದುಷ್ಪರಿಣಾಮಗಳ ಬಗ್ಗೆ ಕೇಳುತ್ತಾ ಬಂದಿರುವ ನಾವು ಪ್ಲಾಸ್ಟಿಕ್ ಹವ್ಯಾಸವನ್ನು ಈ ಸಂಪೂರ್ಣ ಕಳೆದುಕೊಂಡಿದ್ದೇವೆ. ಪ್ಲಾಸ್ಟಿಕ್ನಿಂದ ಮನೆಯ ಡ್ರೈನೇಕ್ ಬ್ಲಾಕ್ ಆದ ಬಳಿಕ ಈ ನಿರ್ಧಾರ ಕೈಗೊಂಡೆವು. ಪ್ಲಾಸ್ಟಿಕ್ನ್ನು ನಿಷೇಧಿಸಬೇಕಿದೆ’ ಎಂದಿದ್ದಾರೆ.
ಹಲವಾರು ಕಡೆ ಪ್ಲಾಸ್ಟಿಕ್ ನಿಷೇಧವಿದ್ದರೂ ಅದರ ಅನುಷ್ಠಾನ ಸಮಪರ್ಕವಾಗಿಲ್ಲ. ಜನರನ್ನು ಪ್ಲಾಸ್ಟಿಕ್ ಹವ್ಯಾಸದಿಂದ ದೂರ ಇಡುವಂತೆ ಮಾಡುವುದು ಅಷ್ಟೊಂದು ಸುಲಭವಲ್ಲ, ಆದರೂ ಅದು ಅಸಾಧ್ಯವಾದುದಲ್ಲ . ಈ ನಿಟ್ಟಿನಲ್ಲಿ ಜನರು, ಸರ್ಕಾರಗಳು ಕಾರ್ಯೋನ್ಮುಖವಾಗಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.