News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರೈತರ ರೂ.8,500 ಕೋಟಿ ಸಾಲಮನ್ನಾ ಮಾಡಿದ ರಾಜಸ್ಥಾನ ಸರ್ಕಾರ

ಜೈಪುರ: ಕೊಟ್ಟ ಭರವಸೆಯನ್ನು ಈಡೇರಿಸಲು ಮತ್ತು ಸಂಕಷ್ಟದಲ್ಲಿನ ರೈತರಿಗೆ ಸಹಾಯಕವಾಗಲು ರಾಜಸ್ಥಾನ ಸಿಎಂ ವಸುಂಧರಾ ರಾಜೆ ಅವರು ರೂ.8,500 ಕೋಟಿ ಮೊತ್ತದ ಸಾಲಮನ್ನಾ ಯೋಜನೆಯನ್ನು ಪ್ರಕಟಿಸಿದ್ದಾರೆ.

ಅಲ್ಲದೇ ಬನ್ಸಾವರ ನಗರದಲ್ಲಿ ಆಯೋಜಿಸಲ್ಪಟ್ಟ ಕಾರ್ಯಕ್ರಮದಲ್ಲಿ ರೈತರಿಗೆ ರೂ.50,000ವರೆಗಿನ ಸಾಲಮನ್ನಾದ ಸರ್ಟಿಫಿಕೇಟ್‌ಗಳನ್ನು ಅವರು ವಿತರಣೆ ಮಾಡಿದ್ದಾರೆ. ಹಲವಾರು ರೈತರಿಗೆ ರೂ.50,000 ಹೊಸ ಸಾಲವನ್ನು ಹಂಚಿಕೆ ಮಾಡಿದ್ದಾರೆ.

ಇದೇ ಮೊದಲ ಬಾರಿಗೆ ರಾಜಸ್ಥಾನದಲ್ಲಿ ನಮ್ಮ ಸರ್ಕಾರ ರೈತರ ರೂ.50,000ರವರೆಗಿನ ಸಾಲವನ್ನು ಮನ್ನಾ ಮಾಡಿದೆ. ಹಿಂದಿನ ಎರಡು ಸರ್ಕಾರಗಳು ಕೇವಲ ರೂ.10,000ರಷ್ಟು ಸಾಲ ಮಾತ್ರ ಮನ್ನಾ ಮಾಡಿತ್ತು ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top