ಕೋಲ್ಕತ್ತಾ: ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದೊಂದಿಗೆ ಎನ್ಸಿಇಆರ್ಟಿ (National Council of Educational Research and Training ) ಸಿಲೆಬಸ್ಗಳನ್ನು ಅರ್ಧದಷ್ಡು ಕಡಿತಗೊಳಿಸಲು ಮಾನವ ಸಂಪನ್ಮೂಲ ಸಚಿವಾಲಯ ಚಿಂತನೆ ನಡೆಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಪ್ರಕಾಶ್ ಜಾವ್ಡೇಕರ್, ‘ದೈಹಿಕ ಶಿಕ್ಷಣ, ಜೀವನ ಕೌಶಲ್ಯ, ನೈತಿಕತೆ ಆಧಾರಿತ ಶಿಕ್ಷಣದ ಬಗ್ಗೆ ಗಮನವನ್ನೇ ನೀಡದೆ ಎನ್ಸಿಇಆರ್ಟಿ ಸಿಲೆಬಸ್ನ್ನು ತಯಾರಿಸಲಾಗಿದೆ, ಹೀಗಾಗಿ ಇದನ್ನು ಅರ್ಧದಷ್ಟು ಕಡಿತಗೊಳಿಸಲು ನಿರ್ಧರಿಸಿದ್ದೇವೆ’ ಎಂದಿದ್ದಾರೆ.
‘ಶಿಕ್ಷಣ ಎನ್ನುವುದು ಕೇವಲ ನೆನಪಿನಲ್ಲಿಟ್ಟುಕೊಳ್ಳುವುದು ಮತ್ತು ಅದನ್ನು ಉತ್ತರಪತ್ರಿಕೆಯಲ್ಲಿ ಬರೆಯುವುದು ಮಾತ್ರವಲ್ಲ, ಶಿಕ್ಷಣ ಎನ್ನುವುದು ಸಮಗ್ರವಾಗಿರಬೇಕು, ಒಬ್ಬರ ಅರಿವು ಮತ್ತು ವಿಶ್ಲೇಷಣಾತ್ಮಕ ಸಾಮರ್ಥ್ಯವನ್ನು ಬಳಕೆ ಮಾಡಿಕೊಳ್ಳುವುದು ನಿಜವಾದ ಶಿಕ್ಷಣ’ ಎಂದಿದ್ದಾರೆ.
ಜೀವನ ಕೌಶಲ್ಯ, ದೈಹಿಕ ಶಿಕ್ಷಣ, ನೈತಿಕ ಶಿಕ್ಷಣಗಳಿಗೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ಸಿಲೆಬಸ್ನ್ನು ಅರ್ಧದಷ್ಟು ಇಳಿಸುವುದಾಗಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.