ನವದೆಹಲಿ: ಬಡ, ಸ್ಲಮ್ ಮಕ್ಕಳಿಗೆ ಶಿಕ್ಷಣ ನೀಡಿರುವ ಒರಿಸ್ಸಾದ ಕಟಕ್ನ ಚಹಾ ಮಾರಾಟಗಾರನ್ನು ಪ್ರಧಾನಿ ನರೇಂದ್ರ ಮೋದಿ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಕೊಂಡಾಡಿದ್ದಾರೆ.
59 ವರ್ಷದ ಚಹಾ ಮಾರಟಗಾರನಾಗಿರುವ ದೇವರಪಳ್ಳಿ ಪ್ರಕಾಶ್ ರಾವ್, ಕಳೆದ 18 ವರ್ಷಗಳಿಂದ 70ಕ್ಕೂ ಅಧಿಕ ಸ್ಲಮ್ ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ. ಗಟಾರ, ಮೋರಿಗಳಲ್ಲಿ ಅಂತ್ಯವಾಗಬೇಕಿದ್ದ ಅವರ ಬದುಕನ್ನು ರಕ್ಷಿಸಿ ಅವರಿಗೆ ಹೊಸ ಜೀವನ ಕಲ್ಪಿಸಿಕೊಟ್ಟಿದ್ದಾರೆ.
ಕಟಕ್ನ ಬಕ್ಸಿ ಬಜಾರ್ನಲ್ಲಿ ಚಹಾ ಅಂಗಡಿ ಇಟ್ಟುಕೊಂಡಿರುವ ಇವರು, ತಮ್ಮ ಶೇ.50ರಷ್ಟು ಆದಾಯವನ್ನು ಬಡ ಮಕ್ಕಳಿಗೆ ಶಿಕ್ಷಣ ಮತ್ತು ಆಹಾರ ನೀಡುವುದಕ್ಕೆ ವ್ಯಯಿಸುತ್ತಾರೆ. ‘ಆಶಾ ಆಶ್ವಾಸನ್’ ಎಂಬ ಶಾಲೆ ನಿರ್ಮಿಸಿ 3ನೇ ತರಗತಿ ತನಕ ಇವರು ಶಿಕ್ಷಣ ನೀಡುತ್ತಾರೆ. ಬಳಿಕ ಮಕ್ಕಳನ್ನು ಬೇರೆ ಸ್ಕೂಲ್ಗೆ ದಾಖಲಿಸುತ್ತಾರೆ.
ಅಷ್ಟೇ ಅಲ್ಲದೇ ಬೀದಿ ಬದಿಯಲ್ಲಿನ ಮಕ್ಕಳಿಗೆ ಹಾಲು, ಬಿಸ್ಕತ್ ಹಂಚಿ ಅವರ ಹಸಿವನ್ನು ನೀಗಿಸುವ ಕಾರ್ಯವನ್ನೂ ಇವರು ಮಾಡುತ್ತಾರೆ.
ಕಟಕ್ಗೆ ತೆರಳಿದ್ದ ವೇಳೆ ರಾವ್ ಅವರನ್ನು ಮತ್ತು ಅವರಿಂದ ಬದುಕು ಕಟ್ಟಿಕೊಂಡ ಮಕ್ಕಳನ್ನು ಮೋದಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆ ಅನುಭವವನ್ನು ಮೋದಿ ಈ ಬಾರಿಯ ತಮ್ಮ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಕೊಂಡಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.