ಮುಂಬಯಿ: ಭೂ ರಹಿತ ಬುಡಕಟ್ಟು ಜಾತಿಯ ಕಾರ್ಮಿಕರು ಕೃಷಿ ಭೂಮಿಯನ್ನು ಹೊಂದಲು ಸಹಕಾರಿಯಾಗುವಂತಹ ಯೋಜನೆಯೊಂದನ್ನು ಮಹಾರಾಷ್ಟ್ರ ಸರ್ಕಾರ ಜಾರಿಗೆ ತಂದಿದೆ.
ಈ ಯೋಜನೆಯನ್ವಯ ಶೇಕಡಾ 5ರಷ್ಟು ಹಣವನ್ನು ಮಾತ್ರ ಪಾವತಿ ಮಾಡಿ ಬುಡಕಟ್ಟು ಜಾತಿಯ ಜನರು ಎಕರೆಯಷ್ಟು ಕೃಷಿ ಭೂಮಿ ಅಥವಾ 2 ಎಕರೆಯಷ್ಟು ನೀರಾವರಿ ಭೂಮಿಯನ್ನು ಖರೀದಿ ಮಾಡಬಹುದು, ಉಳಿದ ಹಣವನ್ನು ಸರ್ಕಾರವೇ ಭರಿಸಲಿದೆ.
ಭೂರಹಿತ ಬುಡಕಟ್ಟು ಜನರ ಕಲ್ಯಾಣಕ್ಕಾಗಿ ತಂದ ದಾದಾಸಾಹೇಬ್ ಗಾಯ್ಕ್ವಾಡ್ ಯೋಜನೆಯ ಪರಿಷ್ಕೃತ ಯೋಜನೆ ಇದಾಗಿದೆ. ದಾದಾಸಾಹೇಬ್ ಗಾಯ್ಕ್ವಾಡ್ ಯೋಜನೆಯಡಿ ಭೂಮಿ ಖರೀದಿಗೆ ಶೇ.50ರಷ್ಟು ಸಬ್ಸಿಡಿ ನೀಡಲಾಗುತ್ತಿತ್ತು ಆದರೆ ಈ ಯೋಜನೆಯ ಪ್ರಯೋಜನವನ್ನು ಕೇವಲ 50 ಲಕ್ಷ ಮಂದಿ ಮಾತ್ರ ಪಡೆದುಕೊಂಡಿದ್ದಾರೆ. ಹೀಗಾಗಿ ಯೋಜನೆಯನ್ನು ಪರಿಷ್ಕರಿಸಿ ಶೇ.95ರಷ್ಟು ಭೂಖರೀದಿ ಹಣವನ್ನು ಸರ್ಕಾರವೇ ಭರಿಸುವ ಯೋಜನೆ ತಂದಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಈ ಸಮುದಾಯವನ್ನು ಅಬಲೀಕರಣಗೊಳಿಸುವ ಮಹತ್ವದ ಗುರಿಯನ್ನು ಹೊಂದಿದೆ.
ಈಗಾಗಲೇ ಸಾಲಮನ್ನಾದ ಮೂಲಕ ಮಹಾರಾಷ್ಟ್ರ ಸರ್ಕಾರ ರೈತರಿಗೆ ಸಂತಸವನ್ನು ನೀಡಿದೆ. ಇದೀಗ ಮತ್ತೊಂದು ಯೋಜನೆಯೊಂದಿಗೆ ಬುಡಕಟ್ಟು ಜನರ ಬದುಕನ್ನು ಹಸನಾಗಿಸಲು ಮುಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.