ರಾಯ್ಪುರ: ಛತ್ತೀಸ್ಗಢದ ಬಸ್ತರ್ ಪ್ರದೇಶದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸುವ ಸಲುವಾಗಿ ‘ಬ್ಲ್ಯಾಕ್ ಪ್ಯಾಂಥರ್’ ವಿಶೇಷ ಪಡೆಯನ್ನು ರಚನೆ ಮಾಡಲಾಗಿದೆ. ತೆಲಂಗಾಣದ ‘ಗ್ರೇಹೌಂಡ್’ ಮಾದರಿಯಲ್ಲಿ ಇದು ಕಾರ್ಯಾಚರಿಸಲಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್, ‘ನಕ್ಸಲಿಸಂ ದೊಡ್ಡ ಸವಾಲಾಗಿದೆ, ಆದರೆ ಅದೀಗ ಮುಳುಗುತ್ತಿದ್ದು, ದೇಶದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಇದರ ಕ್ರೆಡಿಟ್ ಸಿಆರ್ಪಿಎಫ್ ಜವಾನರಿಗೆ ಸಲ್ಲಬೇಕು’ ಎಂದಿದ್ದಾರೆ.
‘ಹುತಾತ್ಮ ಯೋಧರನ್ನು ಹಣದಿಂದ ಅಳೆಯಲಾಗದು, ಆದರೆ ಹೋರಾಟದ ವೇಳೆ ಪ್ರಾಣತೆತ್ತವರಿಗೆ 1 ಕೋಟಿ ರೂಪಾಯಿಗಿಂತ ಕಡಿಮೆ ಪರಿಹಾರ ದೊರಕದಂತೆ ನೋಡಿಕೊಳ್ಳುತ್ತೇವೆ ಎಂದರು.
ನಕ್ಸಲ್ ವಿರುದ್ಧ ಹೋರಾಡಲು ಛತ್ತೀಸ್ಗಢ ಪೊಲೀಸ್ ಇಲಾಖೆ ‘ಬ್ಲ್ಯಾಕ್ ಪ್ಯಾಂಥರ್’ ಪಡೆಯನ್ನು ರಚಿಸಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.