News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಿಜೆಪಿ ಇಂದಿನ ತುರ್ತು ಯಾಕೆ?

ಭಾರತ ದೇಶ ಒಂದು ಪ್ರಜಾಪ್ರಭುತ್ವ ದೇಶ. ಈ ದೇಶ ಅನೇಕ ಧರ್ಮ, ಮತ, ಪಂಥ, ಜಾತಿಗಳಿಂದ ಕೂಡಿದೆ. ಹೀಗಿರುವಾಗ ಇಲ್ಲಿ ಎಲ್ಲರನ್ನು ಸಮಾನತೆಯ ಆಧಾರದಲ್ಲಿ “ಸರ್ವರಿಗೂ ಸಮ ಬಾಳು, ಸರ್ವರಿಗೂ ಸಮ ಪಾಲು” ಎಂಬ ಆಶಯದೊಂದಿಗೆ ನೋಡ ಬೇಕಿದೆ.

ಆದರೆ ಇಲ್ಲಿ ಅಲ್ಪಸಂಖ್ಯಾತರಿಗೆ ಅಲ್ಪಸಂಖ್ಯಾತರೂ ಎನ್ನುವ ನಿಲುವಿನಲ್ಲಿ ವಿಶೇಷ ಆದ್ಯತೆಗಳನ್ನು ದಶಕಗಳಿಂದಲೂ ನೀಡಿದೆ. ಹಾಗೆ ನೋಡಿದರೆ ಈ ದೇಶದ ಅಲ್ಪಸಂಖ್ಯಾತ ಸಮುದಾಯಗಳಿಗೆ ತಮ್ಮ ಸಮುದಾಯದ್ದು ಎಂದು ಹೇಳಿಕೊಳ್ಳುವ ದೇಶಗಳು ಅನೇಕ ಇ. ಆದರೆ ಹಿಂದೂಗಳಿಗೆ ತಮ್ಮದು ಎನ್ನುವ ದೇಶ ಯಾವುದೂ ಇಲ್ಲ. ಇದ್ದ ಭಾರತ ಹಾಗೂ ನೇಪಾಲ ಇಂದು ಜಾತ್ಯಾತೀತ ದೇಶವಾಗಿದೆ. ಹಾಗಾಗಿ ಈ ದೇಶದ ಹಿಂದೂಗಳಿಗೆ ರಕ್ಷಣೆ ನೀಡುವುದು ಯಾವುದೇ ಪಕ್ಷದ ಮುಖ್ಯ ಆದ್ಯತೆಯಾಗಬೇಕು. ಈ ನಿಟ್ಟಿನಲ್ಲಿ ಬಹುಸಂಖ್ಯಾತವಾಗಿದ್ದರೂ ತಮ್ಮದೂ ಎಂಬ ಅಧಿಕೃತ ದೇಶವೇ ಇಲ್ಲದ ಈ ಸಮುದಾಯದ ಸುಭದ್ರತೆಗೆ ಒತ್ತು ನೀಡುವುದು ಪಕ್ಷಗಳ ನಿಲುವಾಗಬೇಕು. ಆದರೆ ಇಂದು ಬಹುಸಂಖ್ಯಾತರ ವಿಚಾರದಲ್ಲಿ ಅನೇಕ ಪಕ್ಷಗಳು ಒಂದು ಸುಭದ್ರ ನಿಲುವನ್ನ ತಾಳುವಲ್ಲಿ ಹಿಂದೇಟು ಹಾಕಿವೆ. ಓಟ್ ಬ್ಯಾಂಕ್ ಲೆಕ್ಕಾಚಾರದಲ್ಲಿ, ಅಲ್ಪಸಂಖ್ಯಾತ ಮತಗಳು ಕೈತಪ್ಪುವ ಭೀತಿಯಲ್ಲಿ ಅನೇಕ ಪಕ್ಷಗಳು ಬಹುಸಂಖ್ಯಾತವಾದ ಹಿಂದುಗಳ ರಕ್ಷಣೆಗೆ ಗಟ್ಟಿ ನಿಲುವು ತಾಳಿದ್ದೇ ಇಲ್ಲ ಎನ್ನಬಹುದು.

ಹೀಗೆ ಬಹುಸಂಖ್ಯಾತ ಹಿಂದೂಗಳನ್ನು ಅನೇಕ ಪಕ್ಷಗಳು ಮುನ್ನೆಲೆಯಲ್ಲಿ ಕಂಡುಕೊಳ್ಳದಿದ್ದರೂ, ಬಿಜೆಪಿ ಬಹುಸಂಖ್ಯಾತರ ಧ್ವನಿಯಾಗಿ ಸದಾ ನಿಂತಿದೆ. ತಮ್ಮದೂ ಎಂಬ ಅಧಿಕೃತ ದೇಶವಿಲ್ಲದ ಈ ಸಮುದಾಯದ ರಕ್ಷಣೆಯ ಧ್ವನಿಯಾಗಿದ್ದರೆ ಅದು ಒಂದಿಡೀ ಸಮುದಾಯದ ಕಳಕಳಿ. ಅಂತಹ ಕಳಕಳಿಯನ್ನು ಬಿಜೆಪಿ ಬಹುಸಂಖ್ಯಾತರಿಗೆ ಸದಾ ತೋರಿದೆ.

ಪ್ರಕಾಶ್ ರಾಜ್ ಇತ್ತೀಚಿಗೆ ಹಿಂದೂ ಧರ್ಮದ ಹೆಸರಲ್ಲಿ ಓಟು ಕೇಳುವುದನ್ನು ಖಂಡಿಸಿ ಮಾತನಾಡಿದ್ದರು. ಧರ್ಮದ ಹೆಸರಲ್ಲಿ ರಾಜಕಾರಣ ತಪ್ಪು ಆದರೆ ಒಂದು ಧರ್ಮದ ಜನರ ರಕ್ಷಣೆಯ ಧ್ವನಿಯಾಗಿ ನಿಲ್ಲುವುದರಲ್ಲಿ ತಪ್ಪೇನು? ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳು ಇರುವಾಗ ಬಹುಸಂಖ್ಯಾತ ಕಲ್ಯಾಣದ ಬಗ್ಗೆ ಮಾತನಾಡುವುದು ತಪ್ಪೆ?

ಯಾವುದೇ ಧರ್ಮದ ಅವಹೇಳನ ಅಕ್ಷಮ್ಯ ಆದರೆ, ಇಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನ ವ್ಯಕ್ತಿ ಸ್ವಾತಂತ್ರ್ಯವಾಗುತ್ತದೆ ಆದರೆ ಬೇರ ಧರ್ಮದ ಕುರಿತು ಅವಹೇಳನ ಧಾರ್ಮಿಕ ಭಾವನೆಗೆ ಧಕ್ಕೆ!!

ಇಂತಹ ಇಬ್ಬಂದಿತನಗಳು ನಿಲ್ಲಬೇಕು, ಎಲ್ಲಾ ಸಮುದಾಯಗಳನ್ನು ಒಂದೇ ತತ್ವದಡಿ ಸರ್ವರಿಗೂ ಸಮ ಬಾಳು, ಸರ್ವರಿಗೂ ಸಮ ಪಾಲು ಎಂಬ ಆಶಯದೊಂದಿಗೆ ಕೊಂಡೊಯ್ಯಬೇಕು. ಹಾಗಾಗಬೇಕಾದರೆ ಬೇರೆ ಪಕ್ಷಗಳಿಗೂ ಬಹುಸಂಖ್ಯಾತ ಹಿಂದೂಗಳ ಕಲ್ಯಾಣವೂ ಮುಖ್ಯ ಎಂದೆನಿಸಬೇಕು. ಅಲ್ಲಿವರೆಗೂ ಬಹುಸಂಖ್ಯಾತರು ತಮ್ಮ ಪರ ಧ್ವನಿಯಾಗುವವರ ಜೊತೆ ಸದಾ ನಿಲ್ಲಬೇಕು.

ಆದ್ದರಿಂದ ಬಿಜೆಪಿ ಇಂದಿನ ತುರ್ತು. ಹಾಗಾಗಿ ಈ ಬಾರಿ ಬಿಜೆಪಿಗೆ ಮತ ನೀಡಿ ಬಹುಸಂಖ್ಯಾತರ ಧ್ವನಿಯಾದವರ ಬಳಿ ಬಹುಸಂಖ್ಯಾತರ ಕಲ್ಯಾಣದ ಹಕ್ಕೊತ್ತಾಯ ಮಾಡಬೇಕಿರುವುದು ಇಂದಿನ ಅಗತ್ಯವೂ ಆದ್ಯತೆಯೂ ಆಗಬೇಕಿದೆ.

ಯೋಗೀಶ್ ಮಲ್ಲಿಗೆಮಾಡು

 

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top