ಎರ್ನಾಕುಲಂ :ನಾಗರಿಕ ಸೇವಾ ಪರೀಕ್ಷೆಗಳನ್ನು ಬರೆಯುವವರು ನಿತ್ಯ ಪುಸ್ತಕಗಳಲ್ಲಿ ತಲ್ಲೀನರಾಗುತ್ತಾರೆ, ಆದರೆ ಕೇರಳ ರೈಲ್ವೇ ಸ್ಟೇಶನ್ನ ಕೂಲಿಯೊಬ್ಬ ಅಲ್ಲಿ ಲಭ್ಯವಿದ್ದ ಉಚಿತ ವೈಫೈ ಸೇವೆಯನ್ನು ಬಳಸಿ ಕೇರಳ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾನೆ.
ಶ್ರೀನಾಥ್ ಎರ್ನಾಕುಲ ಜಂಕ್ಷನ್ ಸ್ಟೇಶನ್ಗೆ ಬಂದಿಳಿಯುವ ಪ್ರಯಾಣಿಕರ ಲಗೇಜ್ ಹೊತ್ತು ಜೀವನ ನಡೆಸುತ್ತಿದ್ದಾನೆ, ಆದರೆ ಪೊಲೀಸ್ ಅಧಿಕಾರಿಯಾಗಬೇಕು ಎಂಬ ಅದಮ್ಯ ಆಸೆ ಆತನೊಳಗೆ ದೃಢವಾಗಿತ್ತು.
ಹೆಗಲಿನಲ್ಲಿ ಲಗೇಜ್ಯಿದ್ದರೂ, ಆತನ ಕಿವಿ ಡಿಜಿಟಲ್ ಕೋರ್ಸ್ವರ್ಕ್ನ್ನು ಸದಾ ಆಲಿಸುತ್ತಿತ್ತು, ಆತನ ಶಿಕ್ಷಕರು ಇಯರ್ಫೋನ್ ಮೂಲಕವೇ ಆತನೊಂದಿಗೆ ಮಾತನಾಡುತ್ತಿದ್ದರು. ಉಚಿತ ವೈಫೈನ್ನು ಆತನ ಇದಕ್ಕಾಗಿ ಸದುಪಯೋಗಪಡಿಸಿಕೊಂಡಿದ್ದಾನೆ.
ಮನಸ್ಸಲ್ಲಿ ಸಾಧಿಸಬೇಕೆಂಬ ದೃಢತೆ ಇದ್ದರೆ, ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಶ್ರೀನಾಥ್ ಉತ್ತಮ ಉದಾಹರಣೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.