ಚೆನ್ನೈ :ರಜಾ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಪೋಷಕರಿಗೂ ‘ಹೋಮ್ ವರ್ಕ್’ ನೀಡುವ ಮೂಲಕ ಚೆನ್ನೈ ಮೂಲದ ಸಂಸ್ಥೆಯೊಂದು ಭಾರೀ ಸುದ್ದಿ ಮಾಡುತ್ತಿದೆ, ಮಕ್ಕಳ ಸಮಗ್ರ ಶಿಕ್ಷಣಕ್ಕೆ ಬೇಕಾದ ಮೂಲ ಅಂಶಗಳ ಬಗ್ಗೆ ಅದು ತಿಳಿಸಿದೆ.
ನಿಮ್ಮ ಮಕ್ಕಳೊಂದಿಗೆ ಕನಿಷ್ಠ ಎರಡು ಹೊತ್ತಿನ ಊಟವನ್ನಾದರೂ ಮಾಡಿ. ಅವರಿಗೆ ಊಟ ಒದಗಿಸಲು 100 ಜನರು ಬೆವರು ಹರಿಸುತ್ತಾರೆ ಎಂಬುದನ್ನು ತಿಳಿಸಿಕೊಡಿ. ಕೃಷಿಯ ಮಹತ್ವದ ಬಗ್ಗೆ, ಗದ್ದೆಯಲ್ಲಿ ಜನರ ಪರಿಶ್ರಮದ ಬಗ್ಗೆ ತಿಳಿಸಿಕೊಡಿ. ಪ್ರತಿ ಊಟದ ಬಳಿಕವೂ ಅವರೇ ಅವರ ತಟ್ಟೆಯನ್ನು ತೊಳೆಯಲಿ. ಇಂತಹ ಹವ್ಯಾಸದಿಂದ ಮಕ್ಕಳು ಕೆಲಸದ ಮಹತ್ವವನ್ನು ಅರಿಯುತ್ತಾರೆ ಎಂದು ಪೋಷಕರಲ್ಲಿ ಮನವಿ ಮಾಡಿಕೊಡಲಾಗಿದೆ.
ನಿಮ್ಮ ಪುಟ್ಟ ಮಗುವಿನ ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಪ್ರಕೃತಿಯ ಆ ಅದ್ಭುತವನ್ನು ನೀಡಿದ ದೇವರಿಗೆ ಧನ್ಯವಾದ ಹೇಳಿ. ನೀವು ಅದರ ತಾತ್ಕಲಿಕ ರಕ್ಷಕರಷ್ಟೇ. ಕೆಲವೇ ಅವಧಿಯಲ್ಲಿ ಆತ/ಆಕೆ ನಿಮ್ಮ ಪಾತ್ರದ ಅಗತ್ಯವೇ ಇಲ್ಲದ ಎತ್ತರಕ್ಕೆ ಏರಲಿದ್ದಾರೆ ಎಂಬ ಅದ್ಭುತ ನುಡಿಯನ್ನು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.