ಸಂಪೂರ್ಣವಾಯಿತು! ನರೇಂದ್ರ ಮೋದಿ ಸರ್ಕಾರ ಕೈಗೊಂಡ ಒಂದು ಮಹತ್ವಾಕಾಂಕ್ಷೆಯ ಯೋಜನೆಯು ಸಂಪೂರ್ಣ ಆಯಿತು. ದೇಶ ಈ ಒಂದು ಕ್ಷಣಕ್ಕಾಗಿ ಕಾಯುತ್ತ ಇತ್ತು . ಇಡೀ ದೇಶದ ಎಲ್ಲಾ ಹಳ್ಳಿಗಳು ಯಾವಾಗ ಬೆಳಕನ್ನು ಕಾಣುತ್ತದೆ ಎಂದು. ಇಂದು ದೇಶದ ಎಲ್ಲಾ ಹಳ್ಳಿಗಳು ವಿದ್ಯುತ್ ಸಂಪರ್ಕ ಪಡೆದಿವೆ.
ಅಂದು 15 ಆಗಸ್ಟ್ 2015 ರಂದು ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವದ ದಿನಾಚರಣೆಯಂದು ದೆಹಲಿಯ ಕೆಂಪುಕೋಟೆಯಲ್ಲಿ ನಿಂತು “ಇನ್ನು ಸಾವಿರ ದಿನಗಳೊಳಗೆ ವಿದ್ಯುತ್ ಸಂಪರ್ಕದಿಂದ ವಂಚಿತವಾಗಿರುವ ದೇಶದ ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸುತ್ತೇನೆ” ಎಂದು ಹೇಳಿದ್ದರು. ನೋಡ ನೋಡುತ್ತಿದ್ದಂತೆ ಒಂದೊಂದಾಗಿಯೇ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕದ ಕೆಲಸ ಆರಂಭವಾಯಿತು. ನೂರು, ಸಾವಿರ, ಐದು ಸಾವಿರ, ಹತ್ತು ಸಾವಿರ, ಹದಿನೈದು ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ನೀಡಲಾಯಿತು. ಮೋದಿ ಹೇಳಿದ ಸಾವಿರ ದಿನಗಳು ಮುಗಿಯಲು ಇನ್ನೂ 15 ರಿಂದ 20 ದಿನಗಳು ಇನ್ನೂ ಬಾಕಿ ಇವೆ. ನುಡಿದಂತೆ ನಡೆದ ಮೋದಿ ಸರಕಾರ ಅಷ್ಟೂ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸಿದೆ. ಅದು ಹಿಮಾಲಯದ ಶ್ರೇಣಿಯ ಕಣಿವೆಯೊಳಗಿನ ಹಳ್ಳಿಯಿರಬಹುದು, ಮರುಭೂಮಿಯೊಳಗಿನ ಹಳ್ಳಿಯಿರಬಹುದು, ಕಾಶ್ಮೀರದಿಂದ ಕನ್ಯಾಕುಮಾರಿ ತನಕ, ಗುಜರಾತ್ ನಿಂದ ಈಶಾನ್ಯ ರಾಜ್ಯಗಳಾದ ಸಿಕ್ಕಿಂ, ಮಿಝೋರಾಂ, ಮೇಘಾಲಯದವರೆಗೆ ಭಾರತದ ಎಲ್ಲ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ಲಭಿಸಿದೆ. ಇದು ಭಾರತ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ ಘಳಿಗೆ.
2014 ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರಕಾರ ವಿದ್ಯುತ್ ಸಂಪರ್ಕವಿರದ ದೇಶದ ಹಳ್ಳಿಗಳ ಕುರಿತು ಸರ್ವೇಯನ್ನು ಮಾಡಿ ವಿದ್ಯುತ್ ಸಂಪರ್ಕ ಇರದ 18452 ಹಳ್ಳಿಗಳನ್ನು ಗುರುತಿಸಿತು. ಪ್ರಧಾನ ಮಂತ್ರಿ ಗ್ರಾಮೀಣ ವಿದ್ಯುತೀಕರಣ ಯೋಜನೆಯೆಂಬ ಯೋಜನೆಯನ್ನು ರೂಪಿಸಿದ ಸರಕಾರವು 1000 ದಿನಗಳೊಳಗೆ ಈ ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವನ್ನು ದೊರಕಿಸುವ ಕಠಿಣ ಗುರಿಯನ್ನು ಹಾಕಿಕೊಂಡಿತು. ದ್ವೀಪಗಳ ನಡುವೆಯ ಹಳ್ಳಿಗಳು, ಬೆಟ್ಟ ಪರ್ವತ ಶ್ರೇಣಿಗಳ ಎಡೆಯ ಹಳ್ಳಿಗಳು, ತಲುಪಲು ತೀರಾ ದುರ್ಗಮವಾಗಿರುವ ಹಳ್ಳಿಗಳು, ಹೀಗೆ ಇರುವ ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸುವ ಮಹಾಕಾರ್ಯವೊಂದು ಸದ್ದಿಲ್ಲದೆ ಇಂದು ಸಾಧಿಸಲ್ಪಟ್ಟಿದೆ. ವಿದ್ಯುತ್ ವಂಚಿತವಾಗಿದ್ದ ಸುಮಾರು ನಾಲ್ಕು ಕೋಟಿ ಮನೆಗಳು,ಸುಮಾರು 25 ಕೋಟಿ ಜನರು ಪ್ರಧಾನ ಮಂತ್ರಿ ಗ್ರಾಮೀಣ ವಿದ್ಯುತ್ ಯೋಜನೆಯಡಿಯಲ್ಲಿ ಮೊದಲ ಬಾರಿಗೆ ವಿದ್ಯುತ್ ಬೆಳಕನ್ನು ಕಾಣುತ್ತಿದ್ದಾರೆ. ನಿಗದಿತ ದಿನದ ಮೊದಲೇ ಗುರಿಯನ್ನು ತಲುಪಿಯಾಗಿದೆ. 18452 ಹಳ್ಳಿಗಳಲ್ಲಿ 1235 ಹಳ್ಳಿಗಳು ಜನವಸತಿ ರಹಿತ ಪ್ರದೇಶಗಳಾಗಿರುವ ಕಾರಣ ಅಲ್ಲಿಗೆ ವಿದ್ಯುತ್ ಸಂಪರ್ಕ ದ ಅವಶ್ಯಕತೆ ಇಲ್ಲದ ಕಾರಣ ಅಲ್ಲಿಗೆ ವಿದ್ಯುತ್ ಸಂಪರ್ಕವನ್ನು ಮಾಡಲಾಗಿಲ್ಲ. ಉಳಿದ ಎಲ್ಲಾ 17181 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ. ಇಂಥದ್ದೊಂದು ಸಾಧನೆಯಾಗಬೇಕಾದರೆ ಸ್ವತಂತ್ರ ಭಾರತವು 70 ಸಂವತ್ಸರಗಳಷ್ಟು ಕಾಯಬೇಕಾಯಿತು ನರೇಂದ್ರ ಮೋದಿಯೇ ಪ್ರಧಾನಿಯಾಗಿ ಬರಬೇಕಾಯಿತು. ಕಾಲ ಮಿತಿಯೊಳ ಗೆ ಯಾವುದೇ ಸರಕಾರಿ ಯೋಜನೆಗಳು ಪೂರ್ಣಗೊಳ್ಳುವುದು ಭಾರತೀಯರಿಗೆ ಗೊತ್ತೇ ಇಲ್ಲ. ಭಾರತದಲ್ಲಿ ಒಂದು ವರ್ಷದಲ್ಲಿ ಮುಗಿಸಬೇಕಾದ ಕೆಲಸವು 10 ವರ್ಷಗಳನ್ನು ತೆಗೆದುಕೊಳ್ಳುವುದು ನಮಗೆ ವಿಶೇಷ ಅನಿಸುವುದಿಲ್ಲ. ನಿಗದಿತ ದಿನಕ್ಕೆ ಮೊದಲೇ ಕೆಲಸವನ್ನು ತೀರಿಸುವ ಸಂಸ್ಕೃತಿ ನಮಗೆ ಹೊಸತು. ಮೋದಿ ಇಂತಹ ಅಸಾಧ್ಯತೆಯನ್ನು ಸಾಧ್ಯ ಎಂದು ತೋರಿಸಿ ಕೊಟ್ಟಿದ್ದಾರೆ. ಗ್ರಾಮೀಣ ವಿದ್ಯುತೀಕರಣ ಯೋಜನೆ (Rural Electrification Corporation Limited) ನ App ನ ಮೂಲಕ ಅಥವಾ ವೆಬ್ ಸೈಟ್ (http://garv.gov.in/) ಮೂಲಕ ಮೇಲಿನ ವಿಷಯ ಗಳನ್ನು ದೃಢೀಕರಿಸಿಕೊಳ್ಳಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.