ತಿರುವನಂತಪುರಂ: ರಕ್ತದಾನದ ಮಹತ್ವವನ್ನು ಸಾರುವ ಸಲುವಾಗಿ 33 ವರ್ಷದ ಕೇರಳದ ಕಿರಣ್ ವರ್ಮಾ ಅವರು ಭಾರತದಾದ್ಯಂತ 6 ಸಾವಿರ ಕಿಮೀ ಪ್ರಯಾಣ ಮಾಡಿದ್ದಾರೆ. ಕ್ಯಾನ್ಸರ್ನಿಂದ ತಾಯಿಯನ್ನು ಕಳೆದುಕೊಂಡ ಬಳಿಕ ‘ಸಿಂಪ್ಲಿ ಬ್ಲಡ್’ ಎಂಬ ರಕ್ತದಾನದ ಆನ್ಲೈನ್ ವೇದಿಕೆಯನ್ನು ರಚಿಸಿದ ಇವರು, ರಕ್ತ ದಾನ ಮಾಡುವ ಮೂಲಕ ಜೀವ ಕಾಪಾಡಬಹುದು ಎಂಬ ಸಂದೇಶ ಸಾರಲು ತಿರುವನಂಪತಪುರಂ, ಕರ್ನಾಟಕ, ರಾಜಸ್ಥಾನ, ಜಮ್ಮು, ಶ್ರೀನಗರ, ಕನ್ಯಾಕುಮಾರಿ ಉದ್ದಗಲಕ್ಕೆ ಸಂಚರಿಸಿದ್ದಾರೆ.
ತಮ್ಮ ಪ್ರಯಾಣದಲ್ಲಿ ಭೇಟಿಯಾದ ಜನರ ವಿಭಿನ್ನ, ಸಂದೇಶ ಸಾರುವ, ಮನಮುಟ್ಟುವ ಕಥೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಇವರು ಹಂಚಿಕೊಂಡಿದ್ದಾರೆ. ಒಟ್ಟು 60 ಸಾವಿರ ಜನರನ್ನು ಭೇಟಿಯಾದೆ ಎಂದು ಇವರು ಹೇಳಿದ್ದಾರೆ. 2600 ಕಿಮೀಯನ್ನು ಇವರು ಕಾಲ್ನಡಿಗೆಯಲ್ಲೇ ಪ್ರಯಾಣಿಸಿದ್ದು, 3400 ಕಿಮೀ ವಿವಿಧ ಸಾರಿಗೆಗಳ ಮೂಲಕ ಪ್ರಯಾಣಿಸಿದ್ದಾರೆ.
ಮಾಲ್, ರೆಸ್ಟೋರೇಂಟ್, ರಸ್ತೆ ಹೀಗೆ ಎಲ್ಲಾ ಜಾಗಗಳಲ್ಲಿ ಸಿಕ್ಕ ಜನರನ್ನು ಇವರು ರಕ್ತದಾನ ಮಾಡಲು ಪ್ರೇರೇಪಿಸಿದ್ದಾರೆ. ರಕ್ತ ಸಿಗದ ಹಿನ್ನಲೆಯಲ್ಲಿ ಭಾರತದಲ್ಲಿ ದಿನಕ್ಕೆ 12 ಸಾವಿರ ಜನರು ಮೃತರಾಗುತ್ತಾರೆ. ಪ್ರತಿ ಕಿಲೋಮೀಟರ್ ವ್ಯಾಪ್ತಿಯ 10 ಜನರಾದರೂ ಜೀನವದಲ್ಲಿ ಒಂದು ಬಾರಿ ರಕ್ತದಾನವನ್ನು ಮಾಡಬೇಕು ಎಂದು ನನ್ನ ಅಭಿಯಾನದ ಉದ್ದೇಶ ಎಂದು ಕಿರಣ್ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.