ಬಿಜಾಪುರ: ಪ್ರತಿಭೆಗೆ ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಲ್ಲುವ ಸಾಮರ್ಥ್ಯ ಇದೆ ಎಂಬುದನ್ನು ಛತ್ತೀಸ್ಗಢದ ನಕ್ಸಲ್ ಪೀಡಿತ ಪ್ರದೇಶದ ಇಬ್ಬರು ಯುವ ಅಥ್ಲೀಟ್ಗಳು ಸಾಧಿಸಿ ತೋರಿಸಿದ್ದಾರೆ.
ಬಿಜಾಪುರ ನಗರದಿಂದ 25 ಕಿಲೋಮೀಟರ್ ದೂರದಲ್ಲಿರುವ ಗಂಗಾಲೂರ್ ಎಂಬ ಸಣ್ಣ ಗ್ರಾಮದ ಅರುಣ ಪುನೆಮ್ ಮತ್ತು ಸುನೀತ ಹಮ್ಲಾ ತಮ್ಮ ಬಾಲ್ಯವನ್ನು ನಕ್ಸಲರ ಕರಿನೆರಳಲ್ಲಿ ಕಳೆದವರು. ಮರ ಕಡಿದು, ಹೂ ಕಿತ್ತು ತಮ್ಮ ಕುಟುಂಬಕ್ಕೆ ನರೆವಾದರು.
ಆದರೀಗ ಈ ಇಬ್ಬರು ಬುಡಕಟ್ಟು ಯುವತಿಯರು ಸಾಫ್ಟ್ಬಾಲ್ ಕ್ರೀಡೆಯಲ್ಲಿ ದೇಶದ ಗಮನವನ್ನು ತಮ್ಮತ್ತ ಸೆಳೆಯುವಂತೆ ಮಾಡಿದ್ದಾರೆ.
ಫಿಲಿಪೈನ್ಸ್ನಲ್ಲಿ ನಡೆಯಲಿರುವ ೭ನೇ ಏಷ್ಯನ್ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಲು ಇವರು ಸಜ್ಜಾಗಿದ್ದಾರೆ.
ಅಷ್ಟೇ ಅಲ್ಲ ಎಪ್ರಿಲ್ ೧೪ರಂದು ಇವರಿಬ್ಬರು ಬಿಜಾಪುರಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.