ಅಗರ್ತಾಲ: ಎಡಪಂಥೀಯ ವಿಚಾರಧಾರೆಗಳನ್ನೇ ಒಳಗೊಂಡ ತ್ರಿಪುರಾದ ಪಠ್ಯಪುಸ್ತಕಗಳನ್ನು ಬದಲಾವಣೆ ಮಾಡುತ್ತಿದ್ದೇವೆ, ಇದಕ್ಕಾಗಿ ಸಮಿತಿಯನ್ನು ರಚಿಸಿ ಅದರ ಶಿಫಾರಸ್ಸಿನಂತೆ ಬದಲಾವಣೆಗಳನ್ನು ತರಲಾಗುವುದು ಎಂದು ಸಿಎಂ ಬಿಪ್ಲಬ್ ಕುಮಾರ್ ದೇಬ್ ಹೇಳಿದ್ದಾರೆ.
ಪ್ರಸ್ತುತ ತ್ರಿಪುರಾ ಪಠ್ಯಪುಸ್ತಕಗಳು ಮಾರ್ಕ್ಸ್ವಾದವನ್ನು ಪ್ರಚಾರಪಡಿಸುತ್ತಿವೆ. ಮಾವೋ, ರಷ್ಯಾ ಕ್ರಾಂತಿ, ಫ್ರೆಂಚ್ ಕ್ರಾಂತಿ, ನಾಝಿಸಂನ್ನು ಒಳಗೊಂಡಿರುವ ಈ ಪುಸ್ತಕಗಳಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆಯಾಗಲಿ ಅಥವಾ ಹಿಂದೂ ರಾಜರ ಬಗ್ಗೆಯಾಗಲಿ ಉಲ್ಲೇಖಗಳಿಲ್ಲ. ಮಹಾತ್ಮ ಗಾಂಧಿಯ ಬೆಗೆಗಿನ ಪಾಠವನ್ನು ತೆಗೆದು ಹಾಕಲಾಗಿದೆ. ಸುಭಾಷ್ ಚಂದ್ರ ಬೋಸ್, ರಾಣೀ ಲಕ್ಷ್ಮೀ ಬಾಯ್ ಅವರ ಬಗ್ಗೆಯೂ ಪಾಠಗಳಿಲ್ಲ ಎಂದು ದೇಬ್ ಹೇಳಿದ್ದಾರೆ.
ಸಿಎಂ ಕಛೇರಿಗೆ ನಾನು ಮೊದಲು ಕಾಲಿಟ್ಟಾಗ ಅಲ್ಲಿ ರಾಷ್ಟ್ರಧ್ವಜವೇ ಇರಲಿಲ್ಲ. ಮಾಜಿ ಸಿಎಂ ಮಾಣಿಕ್ ಸರ್ಕಾರ ತಮ್ಮ ಕಛೇರಿಯಲ್ಲಿ ತಿರಂಗವನ್ನೇ ಇಟ್ಟಿಲ್ಲ. ನಾನು ಮೊದಲ ಬಾರಿಗೆ ಅದನ್ನು ಅಳವಡಿಸಿಕೊಂಡಿದ್ದೇನೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.